ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಜಾಮೀನು ಅರ್ಜಿಯನ್ನು ವಜಾಗೊಂಡಿದೆ. ಇದರ ಬೆನ್ನಲ್ಲೇ ಬಂಧನದ ಭೀತಿ ಹಿನ್ನೆಲೆಯಲ್ಲಿ ಯಾರ ಸಂಪರ್ಕಕ್ಕೂ ಸಿಗದೇ ಅಜ್ಙಾತ ಸ್ಥಳದಲ್ಲಿರುವ ಭವಾನಿ ರೇವಣ್ಣರ ಮಾಹಿತಿಯನ್ನು SIT ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಭವಾನಿ ರೇವಣ್ಣರಿಗಾಗಿ ಹಾಸನ, ಹೊಳೆನರಸೀಪುರ ಸೇರಿ ಬೆಂಗಳೂರಿನಲ್ಲೂ ಹುಡುಕಾಟ ನಡೆಸುತ್ತಿರುವ SIT ಅಧಿಕಾರಿಗಳು ಕಾರಲ್ಲಿ ಇರಬಹುದು ಎಂದು ನಿನ್ನೆ ಫಾಲೊ ಮಾಡಿದ್ದರು. ಆದರೆ ಡ್ರೈವರ್ ಬಿಟ್ಟು ಭವಾನಿ ರೇವಣ್ಣ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಇದೀಗ ಭವಾನಿ ಕಾರು ಡ್ರೈವರ್ರನ್ನು SIT ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಿಡ್ನಾಪ್ ಕೇಸಲ್ಲಿ ಒಳಸಂಚು ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ ಆರೋಪಿ ಸತೀಶ್ ಬಾಬು ಜೊತೆ ಮಾತುಕತೆ ನಡೆಸಿದ್ದರು. ಅದರ ಆಡಿಯೋ ರೆಕಾರ್ಡ್ ಅನ್ನು ರಿಟ್ರೀವ್ ಮಾಡಿಕೊಂಡಿರುವ SIT ಭವಾನಿ ಮೊಬೈಲ್ ಲೊಕೇಷನ್ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ : 6 ತಿಂಗಳಲ್ಲಿ ಬರೋಬ್ಬರಿ 32 ಲಕ್ಷ ದಂಡ ವಸೂಲಿ ಮಾಡಿದ ನಮ್ಮ ಮೆಟ್ರೋ..!