ಬೆಂಗಳೂರು : ಕಳೆದ 5 ವರ್ಷಗಳಿಂದ ಬಾಡಿಗೆ ಪಾವತಿಸದ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಟಿತ ವಾಸವಿ ಕಾಂಡಿಮೆಂಟ್ಸ್ಗೆ ಬೀಗ ಜಡಿದಿದ್ದಾರೆ. ಜಪ್ತಿ ವೇಳೆ ಮಾಲೀಕರಾದ ಗೀತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಕೂಡಲೇ ಗೀತಾರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೋರ್ಟ್ನಿಂದ ವಾಸವಿ ಕಾಂಡಿಮೆಂಟ್ಸ್ ಜಪ್ತಿಗೆ ಆದೇಶವಾಗಿತ್ತು, ಹಾಗಾಗಿ ಸಿಬ್ಬಂದಿ ಅಂಗಡಿಯಲ್ಲಿದ್ದ ಸಾಮಾನು ಹೊರಹಾಕಿ ಬೀಗ ಜಡಿದಿದ್ದಾರೆ. ವಿವಿ ಪುರಂನಲ್ಲಿರುವ ಪ್ರತಿಷ್ಠಿತ ವಾಸವಿ ಕಾಂಡಿಮೆಂಟ್ಸ್ 22 ವರ್ಷಗಳಿಂದ ಅವರೇಕಾಳು ಮೇಳ ಮಾಡ್ತಾ ಬಂದಿದೆ. 1995ರಲ್ಲಿ ಗೀತಾ ವಾಸವಿ ಕಾಂಡಿಮೆಂಟ್ಸ್ ಓಪನ್ ಮಾಡಿದ್ದು, ಮೊದಲು ಮಾವಳ್ಳಿ ಮನೆಯಿಂದ ಬ್ಯುಸಿನೆಸ್ ಶುರುವಾಗಿತ್ತು. ಗೀತಾ ಅವರು SSLC ಓದಿ, ವಾಸವಿ ಕಾಂಡಿಮೆಂಟ್ಸ್ ಕಟ್ಟಿ ಸಾಧನೆ ಮಾಡಿದ್ದರು.
ಸಂಸಾರ ನಡೆಸಲು ಗೀತಾ ಕಾಂಡಿಮೆಂಟ್ಸ್ ಕಟ್ಟಿ ಉದ್ಯಮವಾಗಿ ಬೆಳೆಸಿದ್ದಾರೆ. 30 ಸಾವಿರ ಬಂಡವಾಳದಲ್ಲಿ ಖಾರದ ಐಟಂ ಬ್ಯುಸಿನೆಸ್ ಆರಂಭವಾಗಿತ್ತು. ನಂತರ ಗೀತಾ ಶಿವಕುಮಾರ್ ವಾಸವಿ ಕಾಂಡಿಮೆಂಟ್ಸ್ ತೆರೆದಿದ್ದರು.
ಇದನ್ನೂ ಓದಿ : ಸ್ಟಾರ್ ಸುವರ್ಣ ಭಕ್ತಿಯಿಂದ ಸಮರ್ಪಿಸುತ್ತಿದೆ ಪಾರ್ವತಿ ಜಗನ್ಮಾತೆಯ ಕಥೆ “ಶ್ರೀ ದೇವೀ ಮಹಾತ್ಮೆ” – ಯಾವಗ ಆರಂಭ?