Download Our App

Follow us

Home » ಮೆಟ್ರೋ » ಬೆಂಗಳೂರಿನ ಪ್ರತಿಷ್ಟಿತ ವಾಸವಿ ಕಾಂಡಿಮೆಂಟ್ಸ್​ಗೆ ಬೀಗ – ಕಾರಣವೇನು?

ಬೆಂಗಳೂರಿನ ಪ್ರತಿಷ್ಟಿತ ವಾಸವಿ ಕಾಂಡಿಮೆಂಟ್ಸ್​ಗೆ ಬೀಗ – ಕಾರಣವೇನು?

ಬೆಂಗಳೂರು : ಕಳೆದ 5 ವರ್ಷಗಳಿಂದ ಬಾಡಿಗೆ ಪಾವತಿಸದ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಟಿತ ವಾಸವಿ ಕಾಂಡಿಮೆಂಟ್ಸ್​ಗೆ ಬೀಗ ಜಡಿದಿದ್ದಾರೆ. ಜಪ್ತಿ ವೇಳೆ ಮಾಲೀಕರಾದ ಗೀತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಕೂಡಲೇ ಗೀತಾರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಕೋರ್ಟ್​ನಿಂದ ವಾಸವಿ ಕಾಂಡಿಮೆಂಟ್ಸ್​ ಜಪ್ತಿಗೆ ಆದೇಶವಾಗಿತ್ತು, ಹಾಗಾಗಿ ಸಿಬ್ಬಂದಿ ಅಂಗಡಿಯಲ್ಲಿದ್ದ ಸಾಮಾನು ಹೊರ‌ಹಾಕಿ ಬೀಗ ಜಡಿದಿದ್ದಾರೆ. ವಿವಿ ಪುರಂನಲ್ಲಿರುವ ಪ್ರತಿಷ್ಠಿತ ವಾಸವಿ ಕಾಂಡಿಮೆಂಟ್ಸ್ 22 ವರ್ಷಗಳಿಂದ ಅವರೇಕಾಳು ಮೇಳ ಮಾಡ್ತಾ ಬಂದಿದೆ. 1995ರಲ್ಲಿ ಗೀತಾ ವಾಸವಿ ಕಾಂಡಿಮೆಂಟ್ಸ್​​ ಓಪನ್​ ಮಾಡಿದ್ದು, ಮೊದಲು ಮಾವಳ್ಳಿ ಮನೆಯಿಂದ ಬ್ಯುಸಿನೆಸ್​ ಶುರುವಾಗಿತ್ತು. ಗೀತಾ ಅವರು SSLC ಓದಿ, ವಾಸವಿ ಕಾಂಡಿಮೆಂಟ್ಸ್​ ಕಟ್ಟಿ ಸಾಧನೆ ಮಾಡಿದ್ದರು.

ಸಂಸಾರ ನಡೆಸಲು ಗೀತಾ ಕಾಂಡಿಮೆಂಟ್ಸ್​ ಕಟ್ಟಿ ಉದ್ಯಮವಾಗಿ ಬೆಳೆಸಿದ್ದಾರೆ. 30 ಸಾವಿರ ಬಂಡವಾಳದಲ್ಲಿ ಖಾರದ ಐಟಂ ಬ್ಯುಸಿನೆಸ್​ ಆರಂಭವಾಗಿತ್ತು. ನಂತರ ಗೀತಾ ಶಿವಕುಮಾರ್ ವಾಸವಿ ಕಾಂಡಿಮೆಂಟ್ಸ್ ತೆರೆದಿದ್ದರು. ​​

ಇದನ್ನೂ ಓದಿ : ಸ್ಟಾರ್ ಸುವರ್ಣ ಭಕ್ತಿಯಿಂದ ಸಮರ್ಪಿಸುತ್ತಿದೆ ಪಾರ್ವತಿ ಜಗನ್ಮಾತೆಯ ಕಥೆ “ಶ್ರೀ ದೇವೀ ಮಹಾತ್ಮೆ” – ಯಾವಗ ಆರಂಭ?

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here