Download Our App

Follow us

Home » ಅಪರಾಧ » ಬೆಂಗಳೂರು : ಬೈಕ್ ಡಿಕ್ಕಿಯಿಂದ 50 ಸಾವಿರ ಹಣ ಲಪಟಾಯಿಸಿದ ಖತರ್ನಾಕ್ ಗ್ಯಾಂಗ್..!

ಬೆಂಗಳೂರು : ಬೈಕ್ ಡಿಕ್ಕಿಯಿಂದ 50 ಸಾವಿರ ಹಣ ಲಪಟಾಯಿಸಿದ ಖತರ್ನಾಕ್ ಗ್ಯಾಂಗ್..!

ಬೆಂಗಳೂರು : ಬ್ಯಾಂಕಿನಿಂದ ಹೊರಗಡೆ ಒಂಟಿಯಾಗಿ ಬರುವವರನ್ನೇ ಟಾರ್ಗೆಟ್ ಮಾಡುತ್ತೆ ಈ ಖತರ್ನಾಕ್ ಗ್ಯಾಂಗ್. ಬಳಿಕ ಕ್ಷಣಾರ್ಧದಲ್ಲಿ ಹಣ ಕದ್ದು ಅಲ್ಲಿಂದ ಎಸ್ಕೇಪ್ ಆಗುತ್ತೆ.

ಹೌದು, ಈ ಖತರ್ನಾಕ್ ಗ್ಯಾಂಗ್ ನ ನಾಲ್ವರು ಖದೀಮರು ಹಣ ಕದ್ದು ಎಸ್ಕೇಪ್ ಆಗ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೃದ್ಧ ಕಾಳಪ್ಪ ಎನ್ನುವವರು ಈ ಖದೀಮರ ಕಳ್ಳಟಕ್ಕೆ ತನ್ನ 50 ಸಾವಿರ ಹಣವನ್ನು ಕಳೆದುಕೊಂಡಿದ್ದಾರೆ.

ವೃದ್ಧ ಕಾಳಪ್ಪ ಜ.9 ರಂದು ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ಕೆನರಾ ಬ್ಯಾಂಕ್ ನಲ್ಲಿ ಮಧ್ಯಾಹ್ನ 3 ಗಂಟೆಗೆ 50 ಸಾವಿರ ಹಣ ಡ್ರಾ ಮಾಡಿಕೊಂಡಿದ್ದರು. ಡ್ರಾ ಬಳಿಕ ತಮ್ಮ ಬೈಕ್ ನ ಡಿಕ್ಕಿನಲ್ಲಿ ಇಟ್ಟುಕೊಂಡು ಪಾಪರೆಡ್ಡಿ ಪಾಳ್ಯದ ತಮ್ಮ ನಿವಾಸಕ್ಕೆ ತೆರಳಿದ್ದರು.

ಊಟ ಮಾಡಿ ಕಂಪನಿಗೆ ಹೋಗಿ ಸಿಬ್ಬಂದಿಗೆ ಸಂಬಳ ಕೋಡಬೇಕು ಅಂತಾ ಮನೆ ಒಳಗೆ ಹೋಗಿದ್ದರು. ಅಷ್ಟರಲ್ಲಿ ಅಟೋ ಡ್ರೈವರ್ ಒಬ್ಬ ನಿಮ್ಮ ದಾಖಲೆಗಳು ರಸ್ತೆಯಲ್ಲಿ ಬಿದ್ದಿದೆ ಅಂತಾ ಫೊನ್ ಮಾಡಿ ಯಾಮಾರಿಸಿದ್ದಾನೆ. ವಾಪಸು ಬೈಕ್ ಡಿಕ್ಕಿ ಓಪನ್ ಮಾಡಿ ನೋಡಿದಾಗ ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

ಕಾಳಪ್ಪ ಅವರು ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಖದೀಮರ ಗ್ಯಾಂಗ್ ಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಎರಡು ಬೈಕ್ ಗಳ ಮಧ್ಯೆ ಭೀಕರ ಅಪಘಾತ – ತಂದೆ, ಮಗು ಸ್ಥಳದಲ್ಲೇ ಸಾ*ವು, ತಾಯಿ ಗಂಭೀರ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here