Download Our App

Follow us

Home » ಮೆಟ್ರೋ » ಬೆಂಗಳೂರು : ಆಟವಾಡುತ್ತಿದ್ದಾಗ ಆಯತಪ್ಪಿ ಅಣ್ಣ-ತಂಗಿ ಕೆರೆಗೆ ಬಿದ್ದ ಶಂಕೆ.. ಮುಂದುವರೆದ ಶೋಧ..!

ಬೆಂಗಳೂರು : ಆಟವಾಡುತ್ತಿದ್ದಾಗ ಆಯತಪ್ಪಿ ಅಣ್ಣ-ತಂಗಿ ಕೆರೆಗೆ ಬಿದ್ದ ಶಂಕೆ.. ಮುಂದುವರೆದ ಶೋಧ..!

ಬೆಂಗಳೂರು : ಸಂಜೆ ಆಟವಾಡಲು ಹೋಗಿದ್ದ ಅಣ್ಣ-ತಂಗಿ ಕೆಂಗೇರಿ ಕೆರೆ ಬಳಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಜಾನ್​ ಸೀನಾ (13), ಲಕ್ಷ್ಮೀ(11) ನಾಪತ್ತೆಯಾದವರು. ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳು ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆ ನೀರು ತರಲು ಹೋಗಿದ್ದರು. ನೀರು ತರಲು ಹೋದವರು ಕೆರೆ ಬಳಿ ಆಟವಾಡುತ್ತಿದ್ದರು. ಆಟವಾಡುತ್ತಾ ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಕೆರೆಯ ದಂಡೆ ಮೇಲೆ ಮಕ್ಕಳ ಬಟ್ಟೆ ಮತ್ತು ಬಿಂದಿಗೆ ಪತ್ತೆಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ದೌಡಾಯಿಸಿದ್ದು, ಶೋಧಕಾರ್ಯ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವವ ಮಕ್ಕಳ ತಾಯಿ ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದರು. ಎರಡು ವಾರದ ಮುಂಚೆ ಬಂದು ಕೆಂಗೇರಿ ಕೆರೆಯ ಪಕ್ಕದ ಬಡಾವಣೆಯಲ್ಲಿ ವಾಸವಿದ್ದರು. ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಿದ್ರೂ ಅವರು ಶಾಲೆ ಬಿಟ್ಟಿದ್ದರು. ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದಕ್ಕೆ ತಾಯಿ ನಾಗಮ್ಮ ಕೂಡ ಸುಮ್ಮನಾಗಿದ್ದರು.

ಸೋಮವಾರ ತಾಯಿ ನಾಗಮ್ಮ ಮಕ್ಕಳನ್ನ ಮನೇಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಕೆರೆ ದಂಡೆಯಲ್ಲಿಯೇ ಮಕ್ಕಳು ಆಟ ಆಟವಾಡುತ್ತಿದ್ದರು. ಮೊದಲು ಮಹಾಲಕ್ಷ್ಮಿ  ಕೈತೊಳೆಯೋದಕ್ಕೆ ಅಂತಾ ಹೋಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ನಂತರ ಆಕೆಯನ್ನ ಕಾಪಾಡೋಕೆ ಅಂತಾ ಹೋಗಿ ಅಣ್ಣನೂ ನೀರಲ್ಲಿ ಬಿದ್ದಿರೋ ಶಂಕೆ ವ್ಯಕ್ತವಾಗಿದೆ. ಸಣ್ಣ ಬಿಂದಿಗೆ ಮತ್ತು ಮಕ್ಕಳ ಬಟ್ಟೆಗಳು ಕೆರೆಯ ದಂಡೆ ಬಳಿ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಮಕ್ಕಳು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ಮುಂದುವರೆಸಿದ್ದಾರೆ

ಇದನ್ನೂ ಓದಿ : ಕೇಂದ್ರ ಸಚಿವ ಕುಮಾರಸ್ವಾಮಿಗೆ ತಪ್ಪದ ಸಂಕಷ್ಟ – ಹೆಚ್​ಡಿಕೆ ಜಾಮೀನು ರದ್ದು ಕೋರಿ SIT ಅರ್ಜಿ..!

 

 

 

 

Leave a Comment

DG Ad

RELATED LATEST NEWS

Top Headlines

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.28ಕ್ಕೆ ಮುಂದೂಡಿದ ಹೈಕೋರ್ಟ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಅಕ್ಟೋಬರ್ 28ಕ್ಕೆ ಮುಂದೂಡಿಕೆ ಮಾಡಿದೆ. ನಟ ದರ್ಶನ್

Live Cricket

Add Your Heading Text Here