ಬೆಂಗಳೂರು : ಭಾರೀ ಪ್ರಮಾಣದ ಚಿನ್ನಾಭರಣ ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿರುವ ಪದಮ್ ಜ್ಯುವಲರಿ ಶಾಪ್ಗೆ ನುಗ್ಗಿ ಗನ್ ಪಾಯಿಂಟ್ ತೋರಸಿ ಸಿನಿಮಾ ಸ್ಟೈಲ್ ದರೋಡೆ ಮಾಡಿದ್ದಾರೆ. ರಾತ್ರಿ 9.15ರ ಸುಮಾರಿಗೆ ಆಭರಣ ಮಳಿಗೆಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು, ಕೇವಲ 30 ಸೆಕೆಂಡ್ನಲ್ಲೇ 70 ಲಕ್ಷ ಮೌಲ್ಯದ ಚಿನ್ನ ದರೋಡೆ ಪರಾರಿಯಾಗಿದ್ದಾರೆ. ಖತರ್ನಾಕ್ ಗ್ಯಾಂಗ್ನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂವರಲ್ಲಿ ಓರ್ವ ಬೈಕ್ ಬಳಿ ಇದ್ರೆ, ಇನ್ನೊಬ್ಬ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಮತ್ತೊರ್ವ ಚಿನ್ನಾಭರಣ ಚೀಲದಲ್ಲಿ ತುಂಬಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ಕಲೆ ಹಾಕಿದ್ದು, ತಡರಾತ್ರಿ ಮಳಿಗೆಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : 48 ವರ್ಷಗಳ ಬಳಿಕ ಇಂದು ಲೋಕಸಭೆ ಸ್ಪೀಕರ್ ಚುನಾವಣೆ – ‘NDA’ಯಿಂದ ಓಂ ಬಿರ್ಲಾ, INDIAಯಿಂದ ಕೆ.ಸುರೇಶ್ ಸ್ಪರ್ಧೆ..!