ಬೆಂಗಳೂರು : RR ನಗರ ಶಾಸಕ ಮುನಿರತ್ನ ವಿರುದ್ಧ BBMP ಕಾಂಟ್ರ್ಯಾಕ್ಟರ್ ಚಲುವರಾಜು ಗಂಭೀರ ಆರೋಪ ಮಾಡಿದ್ದಾರೆ. ಇದರ ನಡುವೆ ಕಾಂಟ್ರಾಕ್ಟರ್ಗೆ ಮುನಿರತ್ನ ಬೆದರಿಸಿರುವ ಹಾಗೂ ಅವಾಚ್ಯ ಶಬ್ದಗಳಿಂದ ಬೈದಿರುವ ಆಡಿಯೋ ಕೂಡ ಸ್ಫೋಟಗೊಂಡಿದೆ.
ಸುದ್ದಿಗೋಷ್ಠಿಯಲ್ಲೇ BBMP ಕಾಂಟ್ರ್ಯಾಕ್ಟರ್ ಚಲುವರಾಜು ಮುನಿರತ್ನರದ್ದು ಎನ್ನಲಾದ ಐದು ಆಡಿಯೋ ರಿಲೀಸ್ ಮಾಡಿದ್ದಾರೆ. ದಾಖಲೆ ಸಮೇತ ಆಡಿಯೋ ರಿಲೀಸ್ ಮಾಡಿದ ಅವರು, ಕಾಮಗಾರಿಗಳ ಗುತ್ತಿಗೆ ವಿಚಾರದಲ್ಲಿ ಹಣ ಕೇಳಿದ್ರು. ನನ್ನ ಬಳಿ ಲಕ್ಷ-ಲಕ್ಷ ಹಣ ಕೊಡುವಂತೆ ಕೇಳಿದ್ದರು. ಪದೇ-ಪದೇ ಬಿಬಿಎಂಪಿಗೆ ಪತ್ರ ಕೊಟ್ಟು ಕಿರಿಕ್ ಮಾಡುತ್ತಿದ್ದರು ಎಂದಿದ್ದಾರೆ.
ಇನ್ನು ಹಣ ಇಲ್ಲ ಎಂದಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ರು. ನನ್ನ ತಾಯಿ, ಹೆಂಡತಿ ಬಗ್ಗೆಯೂ ಅಶ್ಲೀಲವಾಗಿ ಮಾತಾಡಿದ್ರು. ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗ್ಬೇಕಾ ಅಂದಿದ್ರು.
ಮುನಿರತ್ನರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಕಾಂಟ್ರಾಕ್ಟರ್ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ಸಲ್ಲಿಸಲು ತೆರಳಿರುವ BBMP ಕಾಂಟ್ರ್ಯಾಕ್ಟರ್ ಚಲುವರಾಜು ಅವರು, ಲೋಕಾಯುಕ್ತಕ್ಕೂ ದೂರು ಕೊಡಲಿದ್ದಾರೆ. ಬಳಿಕ ಸಿಎಂಗೂ ದೂರು ನೀಡಿ ರಕ್ಷಣೆಗೆ ಕೋರಲಿದ್ದಾರೆ.
ಇದನ್ನೂ ಓದಿ : ಈ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಾರೀ ಬದಲಾವಣೆ – ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ..!