ಬೆಂಗಳೂರು : ಬೆಂಗಳೂರು – ನೆಲಮಂಗಲ ಹೈವೇಲಿ ನಡೆಯಬೇಕಿದ್ದ ಭಾರೀ ಘನಘೋರ ದುರಂತವೊಂದು ತಪ್ಪಿದೆ. ಬೆಂಗಳೂರಿಗೆ ಬರ್ತಿದ್ದ KSRTC ಬಸ್ 40 ಅಡಿ ಎತ್ತರದ ಎಕ್ಸ್ಪ್ರೆಸ್ ಹೈವೇನಲ್ಲಿ ಡಿವೈಡರ್ ಹಾರಿ ನಿಂತಿದೆ.
ಸೋಮವಾರಪೇಟೆಯಿಂದ ಬೆಂಗಳೂರಿಗೆ ಬರ್ತಿದ್ದ KSRTC ಬಸ್ ನೆಲಮಂಗಲದ ಅಡಕಮಾರನಹಳ್ಳಿ ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಎಕ್ಸ್ಪ್ರೆಸ್ ಹೈವೇನಲ್ಲಿ ಡಿವೈಡರ್ ಹಾರಿ ನಿಂತ KSRTC ಬಸ್ ಒಂದು ಮೀಟರ್ ದಾಟಿದ್ರೂ ಪ್ರಯಾಣಿಕರ ಸಮೇತ ಬಿದ್ದು ದುರಂತ ನಡೀತಿತ್ತು. ಅದೃಷ್ಟವಶಾತ್ KSRTC ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದು ನಿಂತಿದೆ.
ಇನ್ನು ಕೆಎಸ್ಆರ್ಟಿಸ್ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಡ್ರೈವರ್ ಹಾಗೂ ಕಂಡಕ್ಟರ್ ಸೇರಿ ಬಸ್ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ತುಮಕೂರಿನಲ್ಲಿ ಸಿಲಿಂಡರ್ ಸ್ಪೋಟ : 6 ಮಂದಿಗೆ ಗಾಯ..!
Post Views: 917