ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾಗೌಡ ಹಾಗೂ ಸಹಚರರು ಅರೆಸ್ಟ್ ಆಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸದ್ಯ ಈ ಪ್ರಕರಣ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿರುವಾಗಲೇ, ಅವರ ಗ್ರಹಚಾರ ಸಹ ಸರಿಯಿಲ್ಲ ಎಂಬ ಮಾತುಗಳು ಹೇಳಿಬರುತ್ತಿದೆ.
ಇದರ ನಡುವೆ ನಾನು ಅಂದರೆ ನಂಬರ್ ನಂಬರ್ ಅಂದರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ದರ್ಶನ್ ಅವರ ಜಾತಕ ಹರಿವುಕೊಂಡು ಮುಂದೆ ಏನೆಲ್ಲ ಆಗಬಹುದು ಎನ್ನುವುದನ್ನು ಈಗಾಗಲೇ ಹೇಳಲು ಶುರು ಮಾಡಿದ್ದಾರೆ. ಇದೀಗ ಈ ಬೆನ್ನಲ್ಲೇ ರಾಜಕೀಯದಲ್ಲಿ ದರ್ಶನ್ ಮಿಂಚುವುದು ಖಚಿತ.. ನಿಶ್ಚಿತ ಎಂಬ ಅರ್ಥದಲ್ಲಿ ದರ್ಶನ್ ಮುಂದಿನ ಜೀವನದ ಬಗ್ಗೆ ಜ್ಯೋತಿಷಿ ದಿನೇಶ್ ಭಟ್ ಸ್ಫೋಟಕವಾದ ಭವಿಷ್ಯವೊಂದನ್ನು ನುಡಿದಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ದರ್ಶನ್ ಮುಂದಿನ ಜೀವನದ ಬಗ್ಗೆ ಮಾತನಾಡಿರುವ ಜ್ಯೋತಿಷಿ ದಿನೇಶ್ ಭಟ್ ಅವರು, ಸದ್ಯ ಆರು ತಿಂಗಳವರೆಗೂ ದರ್ಶನ್ ಸೆರೆವಾಸದಲ್ಲೇ ಇರೋ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನೂ ದರ್ಶನ್ ಪರಪ್ಪನ ಅಗ್ರಹಾರದ ಪಾಲಾದ ನಂತರ ಇದೆಲ್ಲವೂ ಸಹವಾಸ ದೋಷ ಮತ್ತು ಸ್ರ್ತೀ ದೋಷದಿಂದ ಎದುರಾದ ಗಂಡಾಂತರ ಎಂದು ಜನಸಾಮಾನ್ಯರೇ ಮಾತನಾಡಿಕೊಂಡಿದ್ದರು. ಈ ಮಾತುಗಳನ್ನೇ ಪುನರುಚ್ಚಿಸಿರುವ ದಿನೇಶ್ ಭಟ್, ದರ್ಶನ್ ಗೆ ಸ್ತ್ರೀ ದೋಷ ಇದೆ ಎಂದಿದ್ದಾರೆ.
ಇನ್ನೂ ಅಜಾಗರೂಕತೆಯಿಂದ ಎದುರಾದ ಈ ಕಷ್ಟಗಳಿಂದ ದರ್ಶನ್ ಮತ್ತೆ ಹೊರ ಬರಲು ಕೆಲ ಸಮಯ ಬೇಕಾಗುತ್ತೆ ಎಂದಿರುವ ದಿನೇಶ್ ಭಟ್, 2026ರ ನಂತರ ದರ್ಶನ್ ಮತ್ತೆ ಕನ್ನಡ ಚಿತ್ರರಂಗದ ಸ್ಟಾರ್ ಹೀರೋ ಆಗಿ ಮಿಂಚುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ. ಜ್ಯೋತಿಷ್ಯದ ಪ್ರಕಾರ ದರ್ಶನ್ ಮುಂದೊಂದು ದಿನ ರಾಜಕೀಯಕ್ಕೆ ಧುಮುಕುವ ಸಾಧ್ಯತೆ ಕೂಡ ಇದೆ ಅಂದಿದ್ದಾರೆ. ಆದರೆ ಅದಕ್ಕೆ ದರ್ಶನ್ ಮನಸು ಮಾಡ್ತಿಲ್ಲ. ಮಾಡಿದರೆ ರಾಜಕೀಯದಲ್ಲಿ ದರ್ಶನ್ ಅವರಿಗೆ ವಜ್ರ ಖಚಿತ ಸಿಂಹಾಸನ ದಕ್ಕುವುದು ಗ್ಯಾರಂಟಿ ಎಂದು ದಿನೇಶ್ ಭಟ್ ತಿಳಿಸಿದ್ದಾರೆ.
ದರ್ಶನ್ ಜೈಲು ಪಾಲಾಗಿದ್ದು ಇದು ಮೊದಲೇನಲ್ಲ. ಇಂದು ಮತ್ತು ಅಂದು. ದರ್ಶನ್ ಅವರಿಗೆ ಎರಡು ಬಾರಿ ಜೈಲಿನಲ್ಲಿದ್ದ ಅನುಭವ ಇದೆ. ಹಾಗಂಥ.. ಇದು ಕೊನೆಯಲ್ಲ. ದಿನೇಶ್ ಭಟ್ ಅವರು ಹೇಳಿರುವ ಭವಿಷ್ಯದ ಪ್ರಕಾರ ಮುಂವರುವ ದಿನಗಳಲ್ಲಿ ದರ್ಶನ್ಗೆ ರಾಜಯೋಗ ಇದ್ದರೂ ಕೂಡ, ಕೆಲ ಕಷ್ಟಗಳು ಎದುರಾಗುತ್ತವೆ. ಇಷ್ಟೇ ಅಲ್ಲ ತನ್ನದಲ್ಲದ ತಪ್ಪಿಗೆ.. ಬೇರೆಯವರಿಗೆ ಉಪಕಾರ ಮಾಡಲು ಹೋಗಿ, ದರ್ಶನ್ ಭವಿಷ್ಯತ್ಕಾಲದಲ್ಲಿ ಮತ್ತೊಮ್ಮೆ ಜೈಲು ಸೇರುವ ಎಲ್ಲ ಸಾಧ್ಯತೆಯೂ ಇದೆ ಎಂದಿದ್ದಾರೆ.
ಇನ್ನೂ ದರ್ಶನ್ ಮತ್ತು ವಿಜಯ ಲಕ್ಷ್ಮೀ ಅವರ ಸಂಬಂಧ ಮುಂದೆ.. ಚೆನ್ನಾಗಿರುತ್ತೆ ಎನ್ನುವ ಭವಿಷ್ಯವನ್ನೂ ಕೂಡ ದಿನೇಶ್ ಭಟ್ ಹೇಳಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮೀ ಆದರ್ಶ ದಂಪತಿಗಳಂತೆ ಮುಂದೆ ಬದುಕುತ್ತಾರೆ ಎಂಬ ಅರ್ಥದಲ್ಲಿ ಮಾತುಗಳನ್ನೂ ಆಡಿದ್ದಾರೆ. ಸದ್ಯಕ್ಕೆ ಜ್ಯೋತಿಷಿ ದಿನೇಶ್ ಭಟ್ ಅವರು ಹೇಳಿರುವಂತೆ ದರ್ಶನ್ ಜೀವನದಲ್ಲಿ ಈ ಭವಿಷ್ಯವಾಣಿ ನಿಜವಾಗುತ್ತ ಅನ್ನುವುದನ್ನೂ ಕಾದುನೋಡಬೇಕಿದೆ.
ಇದನ್ನೂ ಓದಿ : 4 ವರ್ಷ ಸ್ಮಶಾನದಲ್ಲಿ ಕಳೆದಿದ್ದ ಈ ಕನ್ನಡಿಗ ಇಂದು ಟೀಂ ಇಂಡಿಯಾದ ಬೆನ್ನೆಲುಬು – ಥ್ರೋಡೌನ್ ಸ್ಪೆಷಲಿಸ್ಟ್ನ ರೋಚಕ ಸ್ಟೋರಿಯಿದು..!