Download Our App

Follow us

Home » ರಾಜಕೀಯ » ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಮುಂದುವರೆದ ಮುಡಾ ಕೋಲಾಹಲ..!

ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಮುಂದುವರೆದ ಮುಡಾ ಕೋಲಾಹಲ..!

ಬೆಂಗಳೂರು : ಮೂಡಾ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ಸದಸ್ಯರು ನಿನ್ನೆಯಿಂದ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ನಿನ್ನೆ ಸದನದಲ್ಲಿ ಬಿಜೆಪಿ ಸದಸ್ಯರು ಮೂಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್​ ಅವರನ್ನು ಒತ್ತಾಯಿಸಿದ್ದರು. ಆದರೆ ಸ್ಪೀಕರ್ ಅವಕಾಶ ನೀಡದೆ ತಿರಸ್ಕರಿಸಿದ್ದರು. ಈ ಹಿನ್ನೆಲೆ ಪ್ರತಿಪಕ್ಷಗಳು ಸದನದ ಬಾವಿಗಿಳಿದು ರಾಜ್ಯ ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ಧರಣಿ ನಡೆಸಿದರು.

ಇಂದು ಕೂಡ ಸದನಲ್ಲಿ ಮುಡಾ ಕೋಲಾಹಲ ಮುಂದುವರೆದಿದೆ. BJP-JDS ನಾಯಕರು ಮುಡಾ ಹಗರಣ ಚರ್ಚೆಗೆ ಪಟ್ಟು ಹಿಡಿದಿದ್ದು, ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಬಿಜೆಪಿ ಧರಣಿ ನಡೆಸಿದ್ದಾರೆ. ಚರ್ಚೆಗೆ ಅವಕಾಶ ಬೇಕೇಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.

ವಿಪಕ್ಷ ನಾಯಕ ಆರ್​​.ಅಶೋಕ್​ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದು, ಈ ವೇಳೆ ಸ್ಪೀಕರ್​​​ ವಿಪಕ್ಷ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರೂ ಮನವೊಲಿಕೆ ಸಾಧ್ಯವಾಗದಿದ್ದರಿಂದ ಕಲಾಪ ಮುಂದೂಡಿದ್ದರು.

ಇದನ್ನೂ ಓದಿ : ಬೆಂಗಳೂರಲ್ಲಿ ಮಿತಿಮೀರಿದ ಡೆಡ್ಲಿ ವ್ಹೀಲರ್ಸ್​ಗಳ ಕಾಟ – ನಡುರಸ್ತೆಯಲ್ಲಿ ಕಾರಿಗೆ ಒದ್ದು ಚಾಲಕನಿಗೆ ಧಮ್ಕಿ ಹಾಕಿದ ಪುಂಡರು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here