Download Our App

Follow us

Home » ಅಪರಾಧ » ಮಹಿಳೆಯ ಕೊ*ಲೆಗೆ ಯತ್ನ : ಅಂಜಲಿ ಹಂತಕನ ಮೇಲೆ ಮತ್ತೊಂದು FIR..!

ಮಹಿಳೆಯ ಕೊ*ಲೆಗೆ ಯತ್ನ : ಅಂಜಲಿ ಹಂತಕನ ಮೇಲೆ ಮತ್ತೊಂದು FIR..!

ದಾವಣಗೆರೆ : ಅಂಜಲಿ ಹಂತಕನ ಮೇಲೆ ಮತ್ತೊಂದು FIR ದಾಖಲಾಗಿದೆ. ದಾವಣಗೆರೆಯಲ್ಲೂ ವಿಶ್ವನಾಥ್​ ಸಾವಂತ್​ ಮೇಲೆ ರೈಲ್ವೇ ಪೊಲೀಸರು FIR ದಾಖಲು ಮಾಡಿದ್ದಾರೆ. ರೈಲಿನಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ವ್ಯಕ್ತವಾಗಿದ್ದು, ಈ ಬಗ್ಗೆ ಗದಗ ಮೂಲದ ಮಹಾಂತೇಶ್ ಸವಟೂರು ವಿಶ್ವನಾಥ್​ ಸಾವಂತ್​ ವಿರುದ್ಧ ದೂರು ನೀಡಿದ್ದಾರೆ.

ತುಮಕೂರಿನಿಂದ ವಿಶ್ವಮಾನವ ರೈಲಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದರು. ಆರೋಪಿ ಗಿರೀಶ್​ ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿದ್ದ. ಈ ವೇಳೆ ಆರೋಪಿ ಕೆಟ್ಟ ದೃಷ್ಟಿಯಿಂದ ನೋಡಿದ್ದ ಅಂತಾ ಮಹಿಳೆ ಬೈದಿದ್ದಳು. ಚಿಕ್ಕಜಾಜೂರು ರೈಲು ನಿಲ್ದಾಣದಲ್ಲಿ ಮಹಿಳೆ ರೆಸ್ಟ್ ರೂಂಗೆ ಹೋಗಿದ್ದಳು. ಈ ವೇಳೆ ಆರೋಪಿ ರೆಸ್ಟ್​ ರೂಂ ಕಿಟಕಿಯಿಂದ ಕದ್ದು ನೋಡಿದ ಎಂದು ಮಹಿಳೆ ಬೈದಿದ್ದಳು. ಹಾಗಾಗಿ ಆರೋಪಿ ಮಹಿಳೆಯ ಹೊಟ್ಟೆಗೆ ಚಾಕು ಹಾಕಲು ಹೋಗಿದ್ದ.

ಕೈ ಅಡ್ಡ ಕೊಟ್ಟಿದ್ದರಿಂದ ಮಹಿಳೆಯ ಎಡಗೈಗೆ ಗಾಯವಾಗಿತ್ತು, ಜನರು ಆರೋಪಿಯನ್ನು ಹಿಡಿದು ಥಳಿಸಲು ಮುಂದಾದಾಗ ರೈಲಿನಿಂದ ಜಿಗಿದಿದ್ದಾನೆ. ಮಾಯಕೊಂಡ ನಿಲ್ದಾಣ ಸಮೀಪ ಬಂಡೆ ಬೊಮ್ಮನಹಳ್ಳಿ ಸಮೀಪ ಜಂಪ್​​​ ಮಾಡಿದ್ದು, ಆರೋಪಿಗೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಟ್ರೀಟ್​ಮೆಂಟ್​ ಕೊಡಿಸಲಾಗಿತ್ತು. ಮಹಿಳೆ ಪತ್ನಿ ಕೊಟ್ಟ ದೂರಿನ ಮೇಲೆ ಆರೋಪಿ ವಿಶ್ವನಾಥ್​ ಸಾವಂತ್ ವಿರುದ್ಧ ರೈಲ್ವೆ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ : ಕನ್ನಡ ಸ್ಟಾರ್ ನಟರಿಗೆ ಏನಾಗಿದೆ? ಇವರ ಸಿನಿಮಾ ತೆರೆಕಂಡು ಇಷ್ಟೊಂದು ತಿಂಗಳಾಯ್ತ?

Leave a Comment

DG Ad

RELATED LATEST NEWS

Top Headlines

ಒಂದಲ್ಲ.. ಎರಡಲ್ಲ.. ಮೂರನೇ ಮದುವೆಯಾದ್ರಾ ಈ ಬಿಗ್ ಬಾಸ್ ಸ್ಪರ್ಧಿ.. ಯಾರು ಗೊತ್ತಾ?

‘ಇಬ್ಬರು ಹೆಂಡಿರ ಪತಿ’ ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದ ಅರ್ಮಾನ್ ಮಲಿಕ್, ತಮ್ಮ ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಜೊತೆಗೆ

Live Cricket

Add Your Heading Text Here