Download Our App

Follow us

Home » ಅಪರಾಧ » ರೈಲಿನಲ್ಲೂ ರಾಕ್ಷಸತ್ವ ಪ್ರದರ್ಶಿಸಿದ್ದ ಹುಬ್ಬಳ್ಳಿ ಅಂಜಲಿ ಹಂತಕ : ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಹಿಳೆ ಪಾರು..!

ರೈಲಿನಲ್ಲೂ ರಾಕ್ಷಸತ್ವ ಪ್ರದರ್ಶಿಸಿದ್ದ ಹುಬ್ಬಳ್ಳಿ ಅಂಜಲಿ ಹಂತಕ : ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಹಿಳೆ ಪಾರು..!

ದಾವಣಗೆರೆ : ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಹತ್ಯೆಗೈದಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಅಂಜಲಿ ಹಂತಕ ಪರಾರಿಯಾಗುವ ಹೊತ್ತಲ್ಲೇ ರೈಲಿನಲ್ಲೂ ರಾಕ್ಷಸತ್ವ ಪ್ರದರ್ಶಿಸಿದ್ದ. ಈ ವೇಳೆ ಮಹಿಳೆಗೆ ಚಾಕು ಹಾಕಲು ಯತ್ನಿಸಿದ್ದಾನೆ. ರೈಲಿನ ಬಾತ್​ ರೂಂ ವಿಚಾರಕ್ಕೆ ಕಿರಿಕ್​​ ತೆಗೆದು ಇರಿಯಲು ಯತ್ನಿಸಿ, ವಿಶ್ವಮಾನವ ಎಕ್ಸ್​ಎಕ್ಸ್​ಪ್ರೆಸ್ ರೈಲಿ​ನಲ್ಲಿ ದಾನವ ವರ್ತನೆ ತೋರಿದ್ದಾನೆ.

ಹಂತಕ ವಿಶ್ವನಾಥ್​ @ ಗಿರೀಶ್​ ಬೆಂಗಳೂರಿನಿಂದ ದಾವಣಗೆರೆ ಕಡೆ ಬರ್ತಿದ್ದ. ಈ ವೇಳೆ ತುಮಕೂರಿನಿಂದ ಬರ್ತಿದ್ದ ಮಹಿಳೆ ಈತನ ನೋಟ ಸರಿಯಿಲ್ಲ ಎಂದು ಬೈದಿದ್ರು. ಮಹಿಳೆ ರೈಲು ಬಾತ್​ರೂಂಗೆ ಹೋಗಿ ಬಾಗಿಲು ಹಾಕ್ತಿದ್ದಂತೆ ವಿಶ್ವನಾಥ್​​ ಚಾಕು ಹಾಕಿದ್ದ. ಅದೃಷ್ಟವಶಾತ್​ ಮಹಿಳೆಯ ಕೈಗೆ ಚಾಕು ತಗುಲಿ ಗಾಯವಾಗಿತ್ತು. ಕೂಡಲೇ ಪ್ರಯಾಣಿಕರು ಆತನನ್ನು ಹಿಡಿಯಲು ಮುಂದಾಗಿದ್ದರು.

ಮಾಯಕೊಂಡ ಬಳಿ ಆರೋಪಿ ರೈಲಿನಿಂದ ಕೆಳಗೆ ಹಾರಿದ್ದ. ಕೂಡಲೇ ರೈಲ್ವೆ ಪೊಲೀಸರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು. ಅಂಜಲಿ ಕೇಸ್​ನಲ್ಲಿ ಫೋಟೋ ನೋಡಿದ್ದ ASI ನಾಗರಾಜ್​​​ ಗುರುತು ಹಿಡಿದಿದ್ದರು. ತಕ್ಷಣ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ವಶಕ್ಕೆ ಕೊಟ್ಟಿದ್ದರು. ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಆರೋಪಿ ವಿಶ್ವನಾಥ್​ ಸಾವಂತ್​ಗೆ ಚಿಕಿತ್ಸೆ​ ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಅಂಜಲಿ ಮನೆಗೆ ನುಗ್ಗಿ ಕೊಲೆ ಮಾಡಿದ್ದ ವಿಶ್ವನಾಥ್​ ಸಾವಂತ್​​ನನ್ನು ಎನ್​​ಕೌಂಟರ್​ ಮಾಡುವಂತೆ ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ‘ಸಿ’ ಸಿನಿಮಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್..!

Leave a Comment

DG Ad

RELATED LATEST NEWS

Top Headlines

BTV mega exclusive : ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ವಿರುದ್ಧ ಭ್ರಷ್ಟಾಚಾರ ಆರೋಪ..!

ಬೆಂಗಳೂರು : ಜಮೀನು ಖಾತಾ ಮಾಡಿಕೊಡಲು ಫೋನ್​ ಪೇ / ಆನ್ ಲೈನ್ ಮೂಲಕ ಅಧಿಕಾರಿಯೊಬ್ಬರು ಲಂಚ ವಸೂಲಿ ಮಾಡಿರುವ ಆರೋಪವೊಂದು ಕೇಳಿದೆ ಬಂದಿದೆ. ಬೆಂಗಳೂರು ದಕ್ಷಿಣ

Live Cricket

Add Your Heading Text Here