ದಾವಣಗೆರೆ : ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಹತ್ಯೆಗೈದಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಅಂಜಲಿ ಹಂತಕ ಪರಾರಿಯಾಗುವ ಹೊತ್ತಲ್ಲೇ ರೈಲಿನಲ್ಲೂ ರಾಕ್ಷಸತ್ವ ಪ್ರದರ್ಶಿಸಿದ್ದ. ಈ ವೇಳೆ ಮಹಿಳೆಗೆ ಚಾಕು ಹಾಕಲು ಯತ್ನಿಸಿದ್ದಾನೆ. ರೈಲಿನ ಬಾತ್ ರೂಂ ವಿಚಾರಕ್ಕೆ ಕಿರಿಕ್ ತೆಗೆದು ಇರಿಯಲು ಯತ್ನಿಸಿ, ವಿಶ್ವಮಾನವ ಎಕ್ಸ್ಎಕ್ಸ್ಪ್ರೆಸ್ ರೈಲಿನಲ್ಲಿ ದಾನವ ವರ್ತನೆ ತೋರಿದ್ದಾನೆ.
ಹಂತಕ ವಿಶ್ವನಾಥ್ @ ಗಿರೀಶ್ ಬೆಂಗಳೂರಿನಿಂದ ದಾವಣಗೆರೆ ಕಡೆ ಬರ್ತಿದ್ದ. ಈ ವೇಳೆ ತುಮಕೂರಿನಿಂದ ಬರ್ತಿದ್ದ ಮಹಿಳೆ ಈತನ ನೋಟ ಸರಿಯಿಲ್ಲ ಎಂದು ಬೈದಿದ್ರು. ಮಹಿಳೆ ರೈಲು ಬಾತ್ರೂಂಗೆ ಹೋಗಿ ಬಾಗಿಲು ಹಾಕ್ತಿದ್ದಂತೆ ವಿಶ್ವನಾಥ್ ಚಾಕು ಹಾಕಿದ್ದ. ಅದೃಷ್ಟವಶಾತ್ ಮಹಿಳೆಯ ಕೈಗೆ ಚಾಕು ತಗುಲಿ ಗಾಯವಾಗಿತ್ತು. ಕೂಡಲೇ ಪ್ರಯಾಣಿಕರು ಆತನನ್ನು ಹಿಡಿಯಲು ಮುಂದಾಗಿದ್ದರು.
ಮಾಯಕೊಂಡ ಬಳಿ ಆರೋಪಿ ರೈಲಿನಿಂದ ಕೆಳಗೆ ಹಾರಿದ್ದ. ಕೂಡಲೇ ರೈಲ್ವೆ ಪೊಲೀಸರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು. ಅಂಜಲಿ ಕೇಸ್ನಲ್ಲಿ ಫೋಟೋ ನೋಡಿದ್ದ ASI ನಾಗರಾಜ್ ಗುರುತು ಹಿಡಿದಿದ್ದರು. ತಕ್ಷಣ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ವಶಕ್ಕೆ ಕೊಟ್ಟಿದ್ದರು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಆರೋಪಿ ವಿಶ್ವನಾಥ್ ಸಾವಂತ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಅಂಜಲಿ ಮನೆಗೆ ನುಗ್ಗಿ ಕೊಲೆ ಮಾಡಿದ್ದ ವಿಶ್ವನಾಥ್ ಸಾವಂತ್ನನ್ನು ಎನ್ಕೌಂಟರ್ ಮಾಡುವಂತೆ ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ‘ಸಿ’ ಸಿನಿಮಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್..!