Download Our App

Follow us

Home » ರಾಷ್ಟ್ರೀಯ » ಅಡ್ವಾಣಿಗೆ ‘ಭಾರತ ರತ್ನ’ ಗೌರವ – ಅಯೋಧ್ಯೆಯಿಂದ ಸಂತಸ ವ್ಯಕ್ತಪಡಿಸಿದ ಪೇಜಾವರ ಶ್ರೀ..!

ಅಡ್ವಾಣಿಗೆ ‘ಭಾರತ ರತ್ನ’ ಗೌರವ – ಅಯೋಧ್ಯೆಯಿಂದ ಸಂತಸ ವ್ಯಕ್ತಪಡಿಸಿದ ಪೇಜಾವರ ಶ್ರೀ..!

ಉಡುಪಿ : ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿಗೆ ‘ಭಾರತ ರತ್ನ‘ ಘೋಷಣೆಯಾದ ಈ ಸುಸಂದರ್ಭದ ಬಗ್ಗೆ ಅಯೋಧ್ಯೆಯಿಂದ ಪೇಜಾವರ ಶ್ರೀಗಳು ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೇಜಾವರ ಶ್ರೀ ಮಾತನಾಡಿ, ‘ಈ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ. ಅಡ್ವಾಣಿ ಶ್ರೀರಾಮಚಂದ್ರನ ಭಕ್ತಿಯನ್ನು ದೇಶದಲ್ಲಿ ಜಾಗೃತ ಇಟ್ಟವರು. ರಥಯಾತ್ರೆಯ ಮೂಲಕ ಸುಪ್ತವಾಗಿದ್ದ ರಾಮಮಂದಿರ ಹೋರಾಟಕ್ಕೆ ಬಲ ತುಂಬಿದವರು. ಅಡ್ವಾಣಿ ಅವರಿಗೆ ಶ್ರೀ ವಿಶ್ವೇಶ ತೀರ್ಥರ ಜೊತೆ ವಿಶೇಷ ಒಡನಾಟ ಇತ್ತು ಎಂದು ಹೇಳಿದ್ದಾರೆ.

ಈ ವಯಸ್ಸಿನಲ್ಲೂ ಅಡ್ವಾಣಿ ಅವರ ಶೃದ್ಧೆ ಮೆಚ್ಚುವಂಥದ್ದು. ಅಡ್ವಾಣಿ ದೇಶದ ರಾಜಕಾರಣಕ್ಕೆ ಉತ್ತಮ ಮಾರ್ಗದರ್ಶಿಯಾಗಿದ್ದವರು. ಸಾಮಾನ್ಯ ಕಾರ್ಯಕರ್ತನಾಗಿ ಹುಟ್ಟಿ ದೊಡ್ಡ ರಾಜಕಾರಣಿಯಾಗಿ ಬೆಳೆದವರು. ಉಪ ಪ್ರಧಾನಿ ಗೃಹ ಇಲಾಖೆ, ಹಾಗೂ ವಾರ್ತಾ ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.

ಅಡ್ವಾಣಿ ಅವರು ಕೇವಲ ರಾಜಕೀಯ ಮಾತ್ರವಲ್ಲ, ಧಾರ್ಮಿಕ ಪ್ರಜ್ಞೆ ಇರುವ ವ್ಯಕ್ತಿ. ನಾನು ಅಯೋಧ್ಯ ರಾಮ  ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಾಸ್ಥನಾದಾಗ ಅಡ್ವಾಣಿಯವರನ್ನು ಭೇಟಿಯಾಗಿದ್ದೆ. ಅವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಬಂದಿದ್ದೆ.

ಅಡ್ವಾಣಿ ಓರ್ವ ವಿನಯವಂತ ರಾಜಕಾರಣಿ. ಇಳಿ ವಯಸ್ಸಿನಲ್ಲೂ ಬಾಗಿಲವರೆಗೆ ಬಂದು ನನ್ನನ್ನು ಬಿಳ್ಕೊಟ್ಟು ಹೋಗಿದ್ದರು. ರಾಮ ಮತ್ತು ಕೃಷ್ಣ ದೇವರ ಅನುಗ್ರಹ ಅಡ್ವಾಣಿಯವರಿಗೆ ಸದಾ ಕಾಲ ಇರಲಿ ಎಂದು ಪೇಜಾವರ ಶ್ರೀ ಶುಭ ಹರಸಿದ್ದಾರೆ.

ಇದನ್ನೂ ಓದಿ : ಎಲ್.ಕೆ ಅಡ್ವಾಣಿಗೆ ‘ಭಾರತ ರತ್ನ’ ಘೋಷಣೆ – ಪ್ರಧಾನಿ ಮೋದಿ ಅಭಿನಂದನೆ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here