ಬೆಂಗಳೂರು : ಬೆಂಗಳೂರು, ಮಂಡ್ಯ, ಬಳ್ಳಾರಿ, ವಿಜಯಪುರ ಹಾಗೂ ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ಮಾಡುತ್ತಿದೆ. ರೇಡ್ ವೇಳೆ ಚಿನ್ನ, ಬೆಳ್ಳಿ, ದುಬಾರಿ ವಾಚ್, ನಗದು ವಶಕ್ಕೆ ಪಡೆದಿದೆ.
ಬೆಂಗಳೂರಿನಲ್ಲೂ 10 ಕಡೆ ಲೋಕಾ ರೇಡ್ ನಡೆಸಿದ್ದು, ಬೆಸ್ಕಾಂ, BBMP ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಲೋಕಾ ಶಾಕ್ ಕೊಟ್ಟಿದೆ. M.L.ನಾಗರಾಜ್, ಬೆಸ್ಕಾಂ ಚೀಪ್ ಜನರಲ್ ಮ್ಯಾನೇಜರ್, ಪದ್ಮನಾಭ್-PDO , ಕುಂದಾಣ ಗ್ರಾಮ ಪಂಚಾಯತ್, ಮಂಜೇಶ್- BBMP ಟೌನ್ ಪ್ಲಾನಿಂಗ್ ಸದಸ್ಯ ಕಾರ್ಯದರ್ಶಿ ಹಾಗೂ N.ಸತೀಶ್- ಸೂಪರಿಂಟೆಂಡೆಂಟ್ ಎಂಜಿನಿಯರ್, PWD , ಸೈಯದ್ ಮುನೀರ್ ಅಹ್ಮದ್- ಅಸಿಸ್ಟೆಂಟ್ ಚೀಫ್ ಎಂಜಿನಿಯರ್, KRIDL ಮನೆ ಮೇಲೆ ಲೋಕಾ ದಾಳಿ ಮಾಡಿದೆ.
ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ M.L.ನಾಗರಾಜ್ ಮನೆ ಮೇಲೆ ಲೋಕಾ ದಾಳಿ : ಬೆಸ್ಕಾ ಚೀಫ್ ಜನರಲ್ ಮ್ಯಾನೇಜರ್ M.L.ನಾಗರಾಜ್ಗೆ ಲೋಕಾಯುಕ್ತ ಶಾಕ್ ಕೊಟ್ಟಿದ್ದು, ಮನೆ, ಕಚೇರಿ, ತೋಟಗಳಲ್ಲಿ ರೇಡ್ ಮಾಡಿದೆ. 9 ಸೈಟ್, 3 ಮನೆ, ಎರಡು ಪೆಟ್ರೋಲ್ ಬಂಕ್, ನಾಲ್ಕು ಕಡೆ ಕೃಷಿ ಭೂಮಿ ಹೊಂದಿದ್ದಾರೆ. ಬಳ್ಳಾರಿಯ ಕೂಡ್ಲಿಗಿಯಲ್ಲೂ ಜಮೀನು ಮತ್ತು ನಾಗರಾಜ್ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಮಾಹಿತಿ ತಿಳಿದು ಬಂದಿದೆ.
ಕುಂದಾಣ PDO ಪದ್ಮನಾಭ ಮನೆ ಮೇಲೆ ಲೋಕಾ ರೇಡ್ : ಕುಂದಾಣ PDO ಪದ್ಮನಾಭ ಬಳಿ ಬಂಗಲೆ, ಜಮೀನು ಪತ್ತೆಯಾಗಿದ್ದು, ಮಲ್ಲೇಶ್ವರಂನಲ್ಲಿ ನಾಲ್ಕು ಅಂತಸ್ತಿನ ಮನೆ ಹೊಂದಿದ್ದಾರೆ. ತುಮಕೂರಿನ ಅನುಪಾನಹಳ್ಳಿಯಲ್ಲಿ 5 ಎಕರೆ ಕೃಷಿ ಭೂಮಿ ಇದೆ. ಪದ್ಮನಾಭ ದಾಬಸ್ಪೇಟೆಯಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಹೊಂದಿದ್ದು, ಮಲ್ಲೇಶ್ವರಂ, ದಾಬಸ್ಪೇಟೆ, ತುಮಕೂರಿನಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
PWD ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ : PWD ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಸತೀಶ್ ಮೇಲೂ ರೇಡ್ ನಡೆದಿದೆ. ಸತೀಶ್ ಬೆಂಗಳೂರು, ಚಿತ್ರದುರ್ಗ ಸೇರಿ ಹಲವೆಡೆ ಮನೆ, ಆಸ್ತಿ ಹೊಂದಿದ್ದಾರೆ.
ಚಿತ್ರದುರ್ಗದ ಜೆಆರ್ಸಿ ಲೇಔಟ್ನಲ್ಲಿ ವಾಸದ ಮನೆ ಪತ್ನಿ ಹೆಸರಲ್ಲಿದೆ.
ಸತೀಶ್ ಬಾಬು ಸದ್ಯ ಕೆ.ಆರ್.ಸರ್ಕಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಜಯಮಹಲ್ ಎಕ್ಸ್ಟೆನ್ಷನ್ನಲ್ಲಿ ಸರ್ಕಾರಿ ಮನೆಯಲ್ಲಿ ಶೋಧ ಮುಂದುವರೆದಿದೆ. ಚಿತ್ರದುರ್ಗದ ಗುಡದವ್ವನಹಳ್ಳಿಯಲ್ಲಿ 11 ಎಕರೆ ಫಾರ್ಮ್ ಹೌಸ್, ಯಲಹಂಕ ನ್ಯಾಯಾಂಗ ಬಡಾವನೆ ಬಳಿ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ.
ಮಂಡ್ಯದಲ್ಲಿ ಲೋಕಾ ದಾಳಿ : ಲೋಕಾ ಅಧಿಕಾರಿಗಳು ಮಂಡ್ಯದಲ್ಲೂ ದಾಳಿ ಮಾಡಿದ್ದು, BBMP ಟೌನ್ ಪ್ಲಾನಿಂಗ್ ಅಧಿಕಾರಿ ಮಂಜೇಶ್ ಮನೆ ಮೇಲೆ ರೇಡ್ ಮಾಡಿದೆ. ಮಂಜೇಶ್ ಸಂಬಂಧಿಕರ ಮನೆಗಳಲ್ಲಿ ಲೋಕಾ ಶೋಧ ಮುಂದುವರೆಸಿದೆ. ಮಳವಳ್ಳಿ, ಹಲಗೂರು, ಗುಂಡಾಪುರದಲ್ಲಿ ಪರಿಶೀಲನೆ ನಡೆಸಿದೆ.
ಮಂಜೇಶ್ ಸಂಬಂಧಿ ಸುರೇಂದ್ರ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಸುರೇಂದ್ರ ಹಲಗೂರು ಗ್ರಾಮ ಪಂಚಾಯ್ತಿ ಸದಸ್ಯರೂ ಆಗಿದ್ದಾನೆ.
ಮಳವಳ್ಳಿ ತಾಲೂಕು ಹಲಗೂರು ಪಟ್ಟಣದ ಜೆಪಿಎಂ ಬಡಾವಣೆ, ಸುರೇಂದ್ರ ಸ್ವಗ್ರಾಮ ಗುಂಡಾಪುರದ ಮನೆಯಲ್ಲೂ ಹಾಗೂ ಎಸ್.ಐ.ಕೋಡಿಹಳ್ಳಿಯಲ್ಲಿರುವ ಮಂಜೇಶ್ ಅಜ್ಜಿ ಮನೆಯಲ್ಲಿ ಶೋಧ ಮುಂದುವರೆಸಿದೆ.