Download Our App

Follow us

Home » ಅಪರಾಧ » ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾ ಶಾಕ್​​​..

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾ ಶಾಕ್​​​..

ಬೆಂಗಳೂರು : ಬೆಂಗಳೂರು, ಮಂಡ್ಯ, ಬಳ್ಳಾರಿ, ವಿಜಯಪುರ ಹಾಗೂ ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.  30ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ಮಾಡುತ್ತಿದೆ. ರೇಡ್​ ವೇಳೆ ಚಿನ್ನ, ಬೆಳ್ಳಿ, ದುಬಾರಿ ವಾಚ್​, ನಗದು ವಶಕ್ಕೆ ಪಡೆದಿದೆ.

ಲೋಕಾ ಬಲಕ್ಕೆ ಸಂಪುಟ ಒಪ್ಪಿಗೆ | udayavani

ಬೆಂಗಳೂರಿನಲ್ಲೂ 10 ಕಡೆ ಲೋಕಾ ರೇಡ್​ ನಡೆಸಿದ್ದು,  ಬೆಸ್ಕಾಂ, BBMP ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಲೋಕಾ ಶಾಕ್​ ಕೊಟ್ಟಿದೆ. M.L.ನಾಗರಾಜ್​​, ಬೆಸ್ಕಾಂ ಚೀಪ್​​ ಜನರಲ್​ ಮ್ಯಾನೇಜರ್​​, ಪದ್ಮನಾಭ್​​​-PDO , ಕುಂದಾಣ ಗ್ರಾಮ ಪಂಚಾಯತ್​​, ಮಂಜೇಶ್​- BBMP ಟೌನ್​​ ಪ್ಲಾನಿಂಗ್​​​ ಸದಸ್ಯ ಕಾರ್ಯದರ್ಶಿ ಹಾಗೂ N.ಸತೀಶ್​- ಸೂಪರಿಂಟೆಂಡೆಂಟ್​ ಎಂಜಿನಿಯರ್​​, PWD , ಸೈಯದ್​ ಮುನೀರ್​ ಅಹ್ಮದ್​- ಅಸಿಸ್ಟೆಂಟ್​ ಚೀಫ್​​​ ಎಂಜಿನಿಯರ್, KRIDL ಮನೆ ಮೇಲೆ ಲೋಕಾ ದಾಳಿ ಮಾಡಿದೆ.

ಬೆಸ್ಕಾಂ ಚೀಫ್​​​ ಜನರಲ್​​ ಮ್ಯಾನೇಜರ್​ M.L.ನಾಗರಾಜ್​​ ಮನೆ ಮೇಲೆ ಲೋಕಾ ದಾಳಿ :  ಬೆಸ್ಕಾ ಚೀಫ್ ಜನರಲ್ ಮ್ಯಾನೇಜರ್ M.L.ನಾಗರಾಜ್​​ಗೆ ಲೋಕಾಯುಕ್ತ ಶಾಕ್ ಕೊಟ್ಟಿದ್ದು, ಮನೆ, ಕಚೇರಿ, ತೋಟಗಳಲ್ಲಿ ರೇಡ್​ ಮಾಡಿದೆ. 9 ಸೈಟ್​, 3 ಮನೆ, ಎರಡು ಪೆಟ್ರೋಲ್ ಬಂಕ್, ನಾಲ್ಕು ಕಡೆ ಕೃಷಿ ಭೂಮಿ‌ ಹೊಂದಿದ್ದಾರೆ.  ಬಳ್ಳಾರಿಯ ಕೂಡ್ಲಿಗಿಯಲ್ಲೂ ಜಮೀನು ಮತ್ತು ನಾಗರಾಜ್​  ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಮಾಹಿತಿ ತಿಳಿದು ಬಂದಿದೆ.

ಕುಂದಾಣ PDO ಪದ್ಮನಾಭ ಮನೆ ಮೇಲೆ ಲೋಕಾ ರೇಡ್ : ಕುಂದಾಣ PDO ಪದ್ಮನಾಭ ಬಳಿ ಬಂಗಲೆ, ಜಮೀನು ಪತ್ತೆಯಾಗಿದ್ದು, ಮಲ್ಲೇಶ್ವರಂನಲ್ಲಿ ನಾಲ್ಕು ಅಂತಸ್ತಿನ ಮನೆ ಹೊಂದಿದ್ದಾರೆ. ತುಮಕೂರಿನ ಅನುಪಾನಹಳ್ಳಿಯಲ್ಲಿ 5 ಎಕರೆ ಕೃಷಿ ಭೂಮಿ ಇದೆ.  ಪದ್ಮನಾಭ ದಾಬಸ್​ಪೇಟೆಯಲ್ಲಿ ಕಮರ್ಷಿಯಲ್​​ ಬಿಲ್ಡಿಂಗ್​​​ ಹೊಂದಿದ್ದು, ಮಲ್ಲೇಶ್ವರಂ, ದಾಬಸ್​ಪೇಟೆ, ತುಮಕೂರಿನಲ್ಲಿ ತಪಾಸಣೆ ನಡೆಸುತ್ತಿದ್ದಾರೆ.

PWD ಇಲಾಖೆ ಸೂಪರಿಂಟೆಂಡೆಂಟ್​ ಎಂಜಿನಿಯರ್​ ಮನೆ ಮೇಲೆ ಲೋಕಾ ದಾಳಿ :  PWD ಇಲಾಖೆ ಸೂಪರಿಂಟೆಂಡೆಂಟ್​ ಎಂಜಿನಿಯರ್​ ಸತೀಶ್​ ಮೇಲೂ ರೇಡ್​ ನಡೆದಿದೆ. ಸತೀಶ್​ ಬೆಂಗಳೂರು, ಚಿತ್ರದುರ್ಗ ಸೇರಿ ಹಲವೆಡೆ ಮನೆ, ಆಸ್ತಿ ಹೊಂದಿದ್ದಾರೆ.
ಚಿತ್ರದುರ್ಗದ ಜೆಆರ್​ಸಿ ಲೇಔಟ್​ನಲ್ಲಿ ವಾಸದ ಮನೆ ಪತ್ನಿ ಹೆಸರಲ್ಲಿದೆ.

ಸತೀಶ್​ ಬಾಬು ಸದ್ಯ ಕೆ.ಆರ್​​.ಸರ್ಕಲ್​​ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಜಯಮಹಲ್​ ಎಕ್ಸ್​ಟೆನ್ಷನ್​ನಲ್ಲಿ ಸರ್ಕಾರಿ ಮನೆಯಲ್ಲಿ ಶೋಧ ಮುಂದುವರೆದಿದೆ. ಚಿತ್ರದುರ್ಗದ ಗುಡದವ್ವನಹಳ್ಳಿಯಲ್ಲಿ 11 ಎಕರೆ ಫಾರ್ಮ್​​ ಹೌಸ್​, ಯಲಹಂಕ ನ್ಯಾಯಾಂಗ ಬಡಾವನೆ ಬಳಿ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ.

ಮಂಡ್ಯದಲ್ಲಿ ಲೋಕಾ ದಾಳಿ : ಲೋಕಾ ಅಧಿಕಾರಿಗಳು ಮಂಡ್ಯದಲ್ಲೂ ದಾಳಿ ಮಾಡಿದ್ದು, BBMP ಟೌನ್​ ಪ್ಲಾನಿಂಗ್​ ಅಧಿಕಾರಿ ಮಂಜೇಶ್​ ಮನೆ  ಮೇಲೆ ರೇಡ್​ ಮಾಡಿದೆ. ಮಂಜೇಶ್​ ಸಂಬಂಧಿಕರ ಮನೆಗಳಲ್ಲಿ ಲೋಕಾ ಶೋಧ ಮುಂದುವರೆಸಿದೆ. ಮಳವಳ್ಳಿ, ಹಲಗೂರು, ಗುಂಡಾಪುರದಲ್ಲಿ ಪರಿಶೀಲನೆ ನಡೆಸಿದೆ.

ಮಂಜೇಶ್​ ಸಂಬಂಧಿ ಸುರೇಂದ್ರ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಸುರೇಂದ್ರ ಹಲಗೂರು ಗ್ರಾಮ ಪಂಚಾಯ್ತಿ ಸದಸ್ಯರೂ ಆಗಿದ್ದಾನೆ.
ಮಳವಳ್ಳಿ ತಾಲೂಕು ಹಲಗೂರು ಪಟ್ಟಣದ ಜೆಪಿಎಂ ಬಡಾವಣೆ, ಸುರೇಂದ್ರ ಸ್ವಗ್ರಾಮ ಗುಂಡಾಪುರದ ಮನೆಯಲ್ಲೂ ಹಾಗೂ  ಎಸ್​.ಐ.ಕೋಡಿಹಳ್ಳಿಯಲ್ಲಿರುವ ಮಂಜೇಶ್ ಅಜ್ಜಿ ಮನೆಯಲ್ಲಿ ಶೋಧ ಮುಂದುವರೆಸಿದೆ.

 

 

 

 

 

Leave a Comment

DG Ad

RELATED LATEST NEWS

Top Headlines

‘ರಾಜ್ಯ ಸರ್ಕಾರ ಕೆಡವಲು 1000 ಕೋಟಿ ರೆಡಿ’ ಹೇಳಿಕೆ – ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ FIR ದಾಖಲು..!

ದಾವಣಗೆರೆ : ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ‘ರಾಜ್ಯ ಸರ್ಕಾರ ಕೆಡವಲು 1000 ಕೋಟಿ ರೆಡಿಯಾಗಿದೆ’ ಎಂದು ಹೇಳಿಕೆ

Live Cricket

Add Your Heading Text Here