ಬೆಂಗಳೂರು : ಜಮೀನು ಖಾತಾ ಮಾಡಿಕೊಡಲು ಫೋನ್ ಪೇ / ಆನ್ ಲೈನ್ ಮೂಲಕ ಅಧಿಕಾರಿಯೊಬ್ಬರು ಲಂಚ ವಸೂಲಿ ಮಾಡಿರುವ ಆರೋಪವೊಂದು ಕೇಳಿದೆ ಬಂದಿದೆ. ಬೆಂಗಳೂರು ದಕ್ಷಿಣ AC ರಜನಿಕಾಂತ್ ವಿರುದ್ಧ ಜಮೀನು ಮಾಲೀಕ ಶಂಕರ್ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಹೈಟೆಕ್ ಆಗೋಯ್ತಾ ಭ್ರಷ್ಟಾಚಾರ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಬಿಟಿವಿಗೆ AC ರಜನಿಕಾಂತ್ರ ಭ್ರಷ್ಟಾಚಾರದ ದಾಖಲೆ, ಆಡಿಯೋ ಸಾಕ್ಷಿಗಳು ಲಭ್ಯವಾಗಿದೆ. ತಾವರಕೆರೆ ಹೋಬಳಿಯ ಮುದ್ದಯ್ಯನಪಾಳ್ಯದಲ್ಲಿರುವ ಜಮೀನು ಭಾಗವಾದಾಗ ಖಾತಾ ಮಾಡಿಸಲು, ಸೆಪ್ಟಂಬರ್ 2ರಂದು AC ರಜನಿಕಾಂತ್ರನ್ನು ಶಂಕರ್ ಕುಟುಂಬ ಸಂಪರ್ಕಿಸಿದ್ದರು. ಬಂಗಾಲುರಮ್ಮ ಮತ್ತು ಜಯಮ್ಮ ಎಂಬವರಿಗೆ ಪಾಲಿನಲ್ಲಿ ಬಂದ ಸರ್ವೇ ನಂ 32/29ರಲ್ಲಿ 0.08 ಗುಂಟೆ, ಸರ್ವೇ ನಂ 32/11 ರಲ್ಲಿ 0.10 ಗುಂಟೆ ಖಾತಾ ಮಾಡಿಕೊಡಲು ಜಯಮ್ಮನ ಮಗ ಶಂಕರ, AC ರಜನೀಕಾಂತ್ ಬಳಿಗೆ ಹೋಗಿದ್ದರು.
ಈ ವೇಳೆ, AC ರಜನಿಕಾಂತ್ ತಮ್ಮ ಆಪ್ತರನ್ನು ಸಂಪರ್ಕಿಸಲು ಸೂಚಿಸಿದ್ದರು. ರಜನಿಕಾಂತ್ ಪರವಾಗಿ ಆಪ್ತ ಉಮೇಶ್ 60 ಸಾವಿರ ಫೋನ್ ಪೇ ಮಾಡಿಸಿಕೊಂಡಿದ್ದರು. 60 ಸಾವಿರ ಲಂಚ ಪಡೆದ ರಜನಿಕಾಂತ್, ಜಯಮ್ಮ ಹೆಸರಿಗೆ ಖಾತಾ ಮಾಡಿಕೊಟ್ಟಿದ್ದಾರೆ ಎಂದು ಬೆಂಗಳೂರು ದಕ್ಷಿಣ AC ರಜನಿಕಾಂತ್ ವಿರುದ್ಧ ಶಂಕರ್ ಗಂಭೀರ ಆರೋಪ ಮಾಡಿದ್ದಾರೆ.
ಹೀಗಾಗಿ ಲಂಚದ ಡೀಲ್ ಮುಗಿಸಲು AC ರಜನಿಕಾಂತ್ ಆಪ್ತರನ್ನು ಬಿಟ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಖಾತಾ ಮಾಡಲು ಬಂದವರಿಗೆಲ್ಲಾ ಮಲ್ಲೇಶ್ವರಂ ದಾರಿ ತೋರಿಸ್ತಿರೋ AC, ಉಮೇಶ್ ಎಂಬವರ ನಂಬರ್ ಕೊಟ್ಟು ಸಂಪರ್ಕಿಸಲು ತಿಳಿಸುತ್ತಿದ್ದರಂತೆ. ಮಲ್ಲೇಶ್ವರಂನಲ್ಲಿ ಕಚೇರಿ ಮಾಡಿಕೊಂಡು ಕುಳಿತುಕೊಂಡಿರೋ ಆಪ್ತ ಉಮೇಶ್, ಡೀಲ್ ಮುಗಿಸಿ ಪೇಮೆಂಟ್ ಆದ್ರೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದನಂತೆ.
ಇನ್ನು ಉಮೇಶ್ ಹೇಳದೆ ಯಾವ ಫೈಲ್ಗೂ ಸಹಿದ ಮಾಡದ AC ರಜನಿಕಾಂತ್ , ಲಂಚದ ವಿಷ್ಯ ಬಾಯಿ ಬಿಡದಂತೆ ಬೆದರಿಕೆ ಹಾಕಿಯೇ ಆರ್ಡರ್ ಕಾಪಿ ಕೊಡ್ತಾರಂತೆ. ಇನ್ನು AC ರಜನಿಕಾಂತ್ ಭ್ರಷ್ಟಾಚಾರವನ್ನು ಶಂಕರ್ ಅವರು ಸಾಮಾಜಿಕ ಕಾರ್ಯಕರ್ತ ಉಮೇಶ್ ಎಂಬವರ ಬಳಿ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಇದನ್ನೂ ಓದಿ : ಒಂದಲ್ಲ.. ಎರಡಲ್ಲ.. ಮೂರನೇ ಮದುವೆಯಾದ್ರಾ ಈ ಬಿಗ್ ಬಾಸ್ ಸ್ಪರ್ಧಿ.. ಯಾರು ಗೊತ್ತಾ?