ಈ ಹಿಂದಿನ ಸೀಸನ್ಗಳಿಗಿಂತಲೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ಜಗದೀಶ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಲಾಗಿತ್ತು. ಇದರೊಂದಿಗೆ ಜಗದೀಶ್ ಅವರನ್ನು ತಳ್ಳಿದ್ದಕ್ಕೆ ರಂಜಿತ್ ಕೂಡ ಮನೆಯಿಂದ ಎಲಿಮಿನೇಟ್ ಆಗಿದ್ದರು. ದೊಡ್ಮನೆಯಿಂದ ರಂಜಿತ್ ಹೊರ ಬಂದ ನಂತರ ಮತ್ತೆ ಬಿಗ್ ಬಾಸ್ ಮನೆಗೆ ಮರಳಿ ಹೋಗ್ತಾರಾ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೀಗ ಈ ಬಗ್ಗೆ ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಂಜಿತ್ ಅವರು, ಕನಸು ಎಲ್ಲರೂ ಇರುತ್ತೆ. ಎಲ್ಲರೂ ಅವರ ಪ್ರೋಫೆಷನ್ ಅಂತ ಬಂದಾಗ , ದೊಡ್ಡ ಆಫೀಸರ್ ಆಗ್ಬೇಕು, ನಾನ್ ದೊಡ್ಡ ಪೈಲೆಟ್ ಆಗ್ಬೇಕು ಹೀಗೆ ಅನೇಕ ಕನಸುಗಳು ಇರುತ್ತೆ.
ಇವಾಗ ನಾನೂ ಕೂಡ ಏರ್ಲೈನ್ಸ್ ಇಂಡಸ್ಟ್ರಿಯಲ್ಲಿ ಇದ್ದವನು. ಆದ್ರಿಂದ ಹೊರಗಡೆ ಬಂದ ನಂತ್ರ, ಸಿನಿಮಾವನ್ನು ಒಂದು ಪಾರ್ಟ್ ಟೈಮ್, ಫ್ಯಾಷನೇಟ್ ಆಗಿ ತೆಗೆದುಕೊಂಡೆ. ನಂತರ ಫುಲ್ ಟೈಮ್ ಆಗಿ ತೆಗೆದುಕೊಂಡಾಗ ಅಲ್ಲಿ ಎಲ್ಲ ಕಷ್ಟಗಳನ್ನು ನೋಡಿರ್ತಿವಿ. ಒಂದು ಶೋ ಅಂತ ಬಂದಾಗ ಆವಾಗ್ಲೇ ಒಂದು ಆಸೆ ಬರೋದು, ಯಾಕಂದ್ರೆ ಹಿಂದಿಯಲ್ಲಿ ಬರ್ತಾ ಇತ್ತು. ಈಗ ಕನ್ನಡದಲ್ಲಿ ಬರ್ತಾ ಇದೆ. ನಮಗೂ ಒಂದು ಚಾನ್ಸ್ ಸಿಗುತ್ತೇನೋ ಅಂತ ಅನ್ಕೊಂಡಿದ್ದೆ.
ಇನ್ನು ನನ್ನ ತಾಯಿ ಕೂಡ 5-6 ಸೀಸನ್ ಬರ್ಬೆಕಾದ್ರೆ ಹೇಳ್ತಾ ಇರ್ದು, ಎಲ್ಲರೂ ಬಿಗ್ ಮನೆಗೆ ಹೋಗ್ತಾ ಇದ್ದಾರೆ. ನಿನ್ಗೆ ಯಾಕೆ ಹೋಗೋಕೆ ಆಗ್ತಾ ಇಲ್ಲಾ ಅಂತ. ಆಗ ನಾನು ಹೇತ್ತಿದ್ದೆ. ನನ್ಗೂ ಒಂದು ಟೈಮ್ ಬರುತ್ತೆ. ಅಲ್ಲಿವರೆಗೂ ಬಾನು ಕಾಯ್ಬೇಕು ಅಂತ.
ಇವಾಗ 11ನೇ ಸೀಸನ್ಗೆ ನನ್ಗೆ ಟೈಮ್ ಬಂದಾಗ ಅದೂ ಯುಟೈಲೇಜ್ ಅಂತ ಆಗುತ್ತಿತ್ತು. ಆದ್ರೆ 15 ದಿವಸದಲ್ಲಿ ಏನೂ ಪ್ರೀತಿ ವಿಶ್ವಾಸ ಗಳಿಸಿದ್ದೆನ್ನಲ್ಲ ಅದು ಖುಷಿ ಇದ್ರು, ಅದನ್ನು ಕಾಂಪ್ಲೀಟ್ ಮಾಡೋಕೆ ಆಗಿಲ್ಲ ಅಂತ ಬೇಜಾರ್ ಇದ್ದೇ ಇದೆ.
ಬಿಗ್ ಬಾಸ್ ಮನೆಯಲ್ಲಿ ನಾನು ಒಂದು ವಿನ್ನಿಂಗ್ ಕ್ಯಾಂಡಿಡೇಟ್ ಆಗಿ ನಿಂತು ಕೊಂಡಿದ್ದವನು. ಪ್ರತಿ ಟಾಸ್ಕ್ನಲ್ಲಿ ವಿನ್ ಆಗುತ್ತಿದ್ದೆ. ಎಲ್ಲೂ ನಾಮಿನೇಟ್ ಆಗ್ತಿರ್ಲಿಲ್ಲ. ಇನ್ನೂ ಮೂರನೇ ವಿಕ್ನಲ್ಲಿ ನನ್ನ ಗೇಮ್ ಸ್ಟಾರ್ಟ್ ಆಗಿತ್ತು ಅಷ್ಟೇ. ಅದು ಬಂದು ಬೇಜಾರಿದೆ ಕಾಂಪ್ಲಿಟ್ ಆಗಿಲ್ಲ ಅಂತ. ಮುಂದೆ ಗೊತ್ತಲ್ಲ ಏನು ಅಂತ. ಮತ್ತೆ ಬಿಗ್ ಬಾಸ್ಗೆ ಎಂಟ್ರಿ ಕೊಟ್ರೆ, ಹೋಗ್ಬೇಕು ಅಂತನೂ ಒಂದು ಆಸೆ ಇದೆ. ಹೋದ್ರೆ ಬೆಸ್ಟ್ ಕೊಡ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ಗೆ ಸೇರ್ಪಡೆಯಾದ ಸಿ.ಪಿ ಯೋಗೇಶ್ವರ್ – ‘ಕೈ’ಗೆ ಸೈನಿಕನ ಕಂಡೀಷನ್ ಏನೇನು..?