ಕಲಬುರಗಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಗಿಣ ನದಿಗೆ ಬಿದ್ದು ಚಾಲಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ದಂಡೋತಿಯಲ್ಲಿ ನಡೆದಿದೆ. 40 ವರ್ಷದ ನಿಂಗಪ್ಪ ಪೂಜಾರಿ ಮೃತ ದುರ್ದೈವಿ.
ಕಾರಿನಲ್ಲಿದ್ದ ಉಮೇಶ್ ಮತ್ತು ಕೃಷ್ಣ ಎಂಬುವರಿಗೆ ಗಾಯಗಳಾಗಿವೆ. ಚಿಂಚೋಳಿ ತಾಲೂಕಿನ ಕೊಂಚಾವರಂ ಗ್ರಾಮದಿಂದ ತಡರಾತ್ರಿ ಚಿತ್ತಾಪುರಕ್ಕೆ ಬರುತ್ತಿದ್ದರು. ಕೊಂಚಾವರಂನಲ್ಲಿ ಸೆಕೆಂಡ್ ಕಾರು ಖರೀದಿಗಾಗಿ ನಿಂಗಪ್ಪ ಪೂಜಾರಿ ಸೇರಿ ಮೂವರು ಹೋಗ್ತಿದ್ದರು. ವಾಪಾಸ್ ಬರುವಾಗ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಕಾರನ್ನು ಮೇಲೆತ್ತಲು ಪೊಲೀಸರು ಮತ್ತು ಅಗ್ನಿಶಾಮಕ ದಳ ಹರಸಾಹಸ ಪಟ್ಟಿದ್ದಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅತ್ಯಾಚಾರ ಪ್ರಕರಣ : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ..!
Post Views: 245