Download Our App

Follow us

Home » ಮೆಟ್ರೋ » ಬೆಂಗಳೂರಿನಲ್ಲಿ ಮಳೆ ಅವಾಂತರ – ಇಂದು ಸಂಜೆ ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್​..!

ಬೆಂಗಳೂರಿನಲ್ಲಿ ಮಳೆ ಅವಾಂತರ – ಇಂದು ಸಂಜೆ ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್​..!

ಬೆಂಗಳೂರು : ಭಾನುವಾರ ರಾತ್ರಿ ಹಾಗೂ ಇಂದು ಬೆಳ್ಳಂಬೆಳ್ಳಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಮತ್ತು ಕಂಟ್ರೋಲ್ ರೂಂನಿಂದ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಳೆ ಅವಾಂತರ ಹಿನ್ನೆಲೆಯಲ್ಲಿ ಇಂದು ಸಂಜೆ ಅವರು ಸಿಟಿ ರೌಂಡ್ಸ್​​ಗೆ ತೆರಳಲಿದ್ದಾರೆ.

ಮಳೆ ಅವಾಂತರದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಚೀಫ್ ಇಂಜಿನಿಯರ್ ಕರೆಸಿ ಮಾತಾಡಿದ್ದೇನೆ. ಎಲ್ಲೆಲ್ಲಿ ನೀರು ತುಂಬಿಕೊಂಡಿದೆ ಅಲ್ಲೆಲ್ಲಾ ಬೇಗ ಕ್ಲಿಯರ್ ‌ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ರಾತ್ರಿ ಪೂರ್ತಿ ಬೆಂಗಳೂರಿನಲ್ಲಿ ಮಳೆ ಬಂದು ಸಮಸ್ಯೆ ಆಗಿದೆ. ನಾನು ಕಂಟ್ರೋಲ್ ರೂಮ್​ನಲ್ಲಿ ಮಾಹಿತಿ ತೆಗೆದುಕೊಂಡಿದ್ದೇನೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿದ್ದು, ಒಂದೊಂದೇ ಪ್ರದೇಶದಲ್ಲಿ ಕ್ಲಿಯರ್ ಮಾಡುತ್ತಿದ್ದೇವೆ ಎಂದರು.

ಎಲ್ಲೆಲ್ಲಿ ಸಮಸ್ಯೆ ಆಗ್ತಿದೆ ಅಂತ ಜನ ಕೂಡ ಮಾಹಿತಿ ಒದಗಿಸಿದ್ದಾರೆ. ಎಲ್ಲವನ್ನೂ ಒಂದೊಂದಾಗಿ ಕ್ಲಿಯರ್ ಮಾಡುತ್ತೇವೆ. ಈಗ ನಾನು ಸಿಟಿ ರೌಂಡ್ಸ್ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ನಾನು ರೌಂಡ್ಸ್ ಹೋದ್ರೆ ಅಧಿಕಾರಿಗಳ ಕೆಲಸಕ್ಕೂ ತೊಂದರೆ ಆಗುತ್ತದೆ ಎಂದು ಉದ್ದೇಶದಿಂದ ಸಂಜೆ ನಗರ ರೌಂಡ್ಸ್ ಹೋಗುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : BJP ಚಿಹ್ನೆ ಅಡಿಯಲ್ಲೇ ನಿಲ್ತೇನೆ, JDS ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಲ್ಲ – ಸಿಪಿ ಯೋಗೇಶ್ವರ್..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಮುಂದುವರಿದ ವರುಣಾರ್ಭಟ – ಮಳೆ ಅಬ್ಬರಕ್ಕೆ ಹಲವೆಡೆ ಧರೆಗುರುಳಿದ ಬೃಹತ್​ ಮರಗಳು..!

ಬೆಂಗಳೂರು : ಕರ್ನಾಟಕ ರಾಜಧಾನಿ ಬೆಂಗಳೂರು ಭಾರೀ ಮಳೆಗೆ ಅಕ್ಷರಶಃ ನಲುಗುತ್ತಿದೆ. ಸಂಜೆ ಸುರಿಯುತ್ತಿರೋ ವರ್ಷಧಾರೆಗೆ ಬೆಂಗಳೂರಿಗರು ತತ್ತರಿಸುತ್ತಿದ್ದರೇ, ಇನ್ನೊಂದೆಡೆ ಮಳೆ ಅಬ್ಬರಕ್ಕೆ ಹಲವೆಡೆ ಬೃಹತ್​ ಮರಗಳು

Live Cricket

Add Your Heading Text Here