ಬಿಗ್ ಬಾಸ್ ಮನೆಯಲ್ಲಿ 17 ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ ನಾಲಿಗೆ ಹರಿಬಿಟ್ಟಿದ್ರು. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇವರೆನ್ನೆಲ್ಲಾ ನಟ ಸುದೀಪ್ ತರಾಟೆಗೆ ತೆಗೆದುಕೊಳ್ತಿದ್ದಾರೆ.
ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತು ಲಾಯರ್ ಜಗದೀಶ್, ನಾನು ಬಿಗ್ ಬಾಸ್ ಎಕ್ಸ್ ಪೋಸ್ ಮಾಡ್ತಿದ್ದೇನೆ. ನನ್ನನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ನಡೆಸಲು ಆಗುತ್ತಾ ಎಂದು ಲಾಯರ್ ಜಗದೀಶ್ ಸವಾಲ್ ಹಾಕಿದ್ರು. ಈ ಮಾತಿಗೆ ಸುದೀಪ್ ಗರಂ ಆಗಿದ್ದು, ಜಗದೀಶ್ ಗೆ ಬೆವರಿಳಿಸಿದ್ದಾರೆ. ಚಾಲೆಂಜ್ ಮಾಡಿದ್ದು ತಪ್ಪೇ ಅಲ್ಲ, ಅದೊಂದು ಕಾಮಿಡಿ ಎಂದು ಲಾಯರ್ಗೆ ತಿರುಗೇಟು ಕೊಟ್ರು, ಇದಕ್ಕೆ ಬಿಗ್ ಬಾಸ್ ಇತರ ಸ್ಪರ್ಧಿಗಳು ಕೂಡ ಚಪ್ಪಾಳೆ ತಟ್ಟಿದ್ರು.
ಬಿಗ್ ಬಾಸ್ ಅನ್ನೋದು ಒಂದು ಅದ್ಬುತವಾದ ಶೋ ಆಗಿದೆ. ಇದನ್ನು ಇಂಪ್ರೂವ್ ಮಾಡೋದು ಈಗ ಇರುವ ನಿಮ್ಮ ಕೈಯಲ್ಲಿದೆ, ಆದ್ರೆ ಹಾಳು ಮಾಡೋದು ನಿಮ್ಮಪ್ಪನ ಆಣೆ ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಸುದೀಪ್ ಖಡಕ್ ವಾರ್ನಿಂಗ್ ನೋಡಿ ಜಗದೀಶ್ ಮಂಕಾಗಿದ್ದಾರೆ.
ಲಾಯರ್ ಜಗದೀಶ್ ಹೆಣ್ಮಕ್ಕಳ ಮುಂದೆ ಬಟ್ಟೆ ಬದಲಿಸ್ತಾರೆ ಎಂದು ಹಂಸ ದೂರಿದ್ರು. ಡ್ರೆಸ್ಸಿಂಗ್ ರೂಮ್ನಲ್ಲಿ ಬಟ್ಟೆ ಬದಲಿಸಿ ಅಂದ್ರು ಕೇಳಲ್ಲ. ಹೆಣ್ಮಕ್ಕಳು ಇದ್ದಾರೆ ಅಂತ ಗೊತ್ತಿದ್ರು, ಅರೆ-ಬರೆ ಬಟ್ಟೆಯಲ್ಲಿ ಓಡಾಡ್ತಾರೆ ಎಂದು ಹಂಸ ಹೇಳಿದ್ರು. ಇದಕ್ಕೆ ಪಕ್ಕದಲ್ಲಿ ದೊಡ್ಮನೆ ಮಹಿಳೆಯರು ಕೂಡ ತಲೆಯಾಡಿಸಿದ್ರು. ಕ್ಯಾಪ್ಟನ್ ಆಗಿರುವ ನೀವು ಅವರನ್ನು ಸರಿ ಮಾಡಿ ಎಂದು ಸುದೀಪ್ ಹೇಳಿದ್ರು.