ಕನ್ನಡದ ಬಿಗ್ ರಿಯಾಲಿಟಿ ಶೋ ಸೀಸನ್ 11 ಶುರುವಾಗಿ ಒಂದು ವಾರ ಕಂಪ್ಲೀಟ್ ಆಗಿದೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ ನಾಲಿಗೆ ಹರಿಬಿಟ್ಟಿದ್ರು. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇವರೆನ್ನೆಲ್ಲಾ ನಟ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ರೂಲ್ಸ್ ಬ್ರೇಕ್ ಮಾಡಿದ ಲಾಯರ್ ಜಗದೀಶ್, ಬಿಗ್ ಬಾಸ್ ಬಗ್ಗೆಯೇ ಕೇವಲವಾಗಿ ಮಾತಾಡಿದ್ರು. ಬಿಗ್ಬಾಸ್ ಅನ್ನೇ ಉಡೀಸ್ ಮಾಡ್ತೀನಿ ಅಂತ ಹೇಳಿದ್ದ ಲಾಯರ್ ಜಗದೀಶ್ಗೆ ಇದೀಗ ಸುದೀಪ್ ಮೈ ಚಳಿ ಬಿಡಿಸಿದ್ದಾರೆ.
ಹೌದು, ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತು, ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದರು. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ ಎಂದು ಲಾಯರ್ ಜಗದೀಶ್ ಸವಾಲ್ ಹಾಕಿದ್ದರು.
ಇದೀಗ ವಾರದ ಕಥೆ ಕಿಚ್ಚ ಸುದೀಪನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ನಗು ನಗುತ್ತಲೇ ಕ್ರಿಮಿನಲ್ ಲಾಯರ್ಗೆ ಟಾಂಗ್ ಕೊಟ್ಟಿದ್ದಾರೆ. ಬಿಗ್ ಬಾಸ್ ಅನ್ನೋದು ಒಂದು ಅದ್ಬುತವಾದ ಶೋ ಆಗಿದೆ. ಇದನ್ನು ಇಂಪ್ರೂವ್ ಮಾಡೋದು ಈಗ ಇರುವ ನಿಮ್ಮ ಕೈಯಲ್ಲಿದೆ, ಆದ್ರೆ ಹಾಳು ಮಾಡೋದು ನಿಮ್ಮಪ್ಪನ ಆಣೆ ಸಾಧ್ಯವಿಲ್ಲ ಎಂದು ಕಿಚ್ಚ ಖಡಕ್ ಆಗಿ ಹೇಳಿದ್ದಾರೆ. ಈ ಮಾತನ್ನು ಕೇಳಿದ ಲಾಯರ್ ಜಗದೀಶ್ ಸೈಲೆಂಟ್ ಆಗಿ ಕುಳಿತುಕೊಂಡಿದ್ದರು.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ – 40 ಲಕ್ಷದ ಮೂಲ ಬಿಚ್ಚಿಟ್ಟ ವಕೀಲ ಸಿ.ವಿ.ನಾಗೇಶ್..!