ಬಳ್ಳಾರಿ : ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಭರ್ಜರಿ ಮಳೆಯಾಗಿದ್ದು, ಮಳೆ ಆರ್ಭಟಕ್ಕೆ ಹಳ್ಳ ಕೊಳ್ಳಗಳು ಉಕ್ಕಿ ಹರಿದಿದೆ. ಪರಿಣಾಮ ಸಂಡೂರಿನ ಗಣಿ ಪ್ರದೇಶದಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರಿನಲ್ಲಿ ನೂರಾರು ಗಣಿ ಲಾರಿಗಳು ಭಾಗಶಃ ಮುಳುಗಡೆಯಾಗಿದೆ.
ಲಾರಿಗಳು ಜಲಾವೃತಗೊಂಡ ಹಿನ್ನೆಲೆ ಇಡೀ ರಾತ್ರಿ ಡ್ರೈವರ್ಗಳು ಪರದಾಡಿದ್ದು, ಸಂಡೂರಿನ ನಂದಿಹಳ್ಳಿ ವಾಶಿಂಗ್ ಪ್ಲಾಂಟ್ ಬಳಿ ಮಳೆ ಅವಾಂತರ ಕಂಡು ಲಾರಿ ಡ್ರೈವರ್ಗಳು ನಲುಗಿ ಹೋಗಿದ್ದಾರೆ. ಕುಮಾರಸ್ವಾಮಿ ಬೆಟ್ಟದಲ್ಲಿ ಸುರಿದ ಮಳೆಯಿಂದ ಈ ಅವಾಂತರ ಸೃಷ್ಟಿಯಾಗಿದೆ.
ತಡ ರಾತ್ರಿ ಮೈನ್ಸ್ ಲೋಡ್ಗೆಂದು ಲಾರಿಗಳು ಹೋಗಿದ್ದವು. ಈ ವೇಳೆ ಸ್ವಾಮಿ ಮಲೈ, ದೋಣಿ ಮಲೈ, ಕುಮಾರಸ್ವಾಮಿ ಬೆಟ್ಟದಲ್ಲಿ ಭಾರೀ ಮಳೆಯಾಗಿದೆ. ಹಾಗಾಗಿ ಮೈನ್ಸ್ ಲೋಡಿಂಗ್ಗೆ ತೆರಳಿದ್ದ ಲಾರಿಗಳು ಇಡೀ ರಾತ್ರಿ ಪರದಾಟ ನಡೆಸುವಂತಾಗಿತ್ತು. ಬೆಳಗ್ಗೆ ನೀರು ಕಡಿಮೆಯಾದ್ಮೇಲೆ ಲಾರಿಗಳು ಹೊರಬಂದಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯ್ತಿ.. ಎಲಿಮಿನೇಟ್ ಆಗೋದ್ಯಾರು?