Download Our App

Follow us

Home » ಸಿನಿಮಾ » ಬಿಗ್​ಬಾಸ್​ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯ್ತಿ.. ಎಲಿಮಿನೇಟ್ ಆಗೋದ್ಯಾರು?

ಬಿಗ್​ಬಾಸ್​ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯ್ತಿ.. ಎಲಿಮಿನೇಟ್ ಆಗೋದ್ಯಾರು?

ಕಿಚ್ಚನ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್​ ಬಾಸ್​ ಕನ್ನಡ ಸೀಸನ್​ 11 ಕಾರ್ಯಕ್ರಮ ಭಾರೀ ಕುತೂಹಲತೆಯಿಂದ ಸಾಗುತ್ತಿದೆ. ಹಾಗಯೇ ‘ಬಿಗ್ ಬಾಸ್ 11’ರ ಮೊದಲ ‘ಕಿಚ್ಚನ ಪಂಚಾಯ್ತಿ’ ಇಂದು ನಡೆಯಲಿದೆ. ಇದಕ್ಕಾಗಿ ಎಲ್ಲರೂ ಕಾದಿದ್ದಾರೆ.

ಮೊದಲ ವಾರವೇ ಬಿಗ್ ಬಾಸ್​ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಜಗದೀಶ್, ಯಮುನಾ, ಹಂಸ, ಭವ್ಯಾ, ಗೌತಮಿ, ಚೈತ್ರಾ, ಶಿಶಿರ್, ಮೋಕ್ಷಿತಾ ಹಾಗೂ ಮಾನಸ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ.

ಬಿಗ್​ಬಾಸ್ ಸೀಸನ್​-11 ಶುರುವಾಗಿ ಒಂದು ವಾರ ಕಳೆದಿದ್ದು, ಈ ಸೀಸನ್​ನ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಇಂದು ನಡೆಯುತ್ತಿದೆ. ಒಂದು ವಾರದಲ್ಲಿ ನಡೆದ ಸ್ಪರ್ಧಿಗಳ ಮನರಂಜನೆಯ ಕಥಾವಸ್ತು ಇಟ್ಕೊಂಡು, ಸರಿ, ತಪ್ಪುಗಳ ಬಗ್ಗೆ ಕಿಚ್ಚ ಸುದೀಪ್ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

ಈ ವೇಳೆ ಸುದೀಪ್, ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಯಾರಿಗೆಲ್ಲ ಕಿವಿ ಮಾತು ಹೇಳಲಿದ್ದಾರೆ ಅನ್ನೋದ್ರ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡ್ತಿದ್ದು, ರಾತ್ರಿ 9 ಗಂಟೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ತಪ್ಪು ಮಾಡಿದ, ತಪ್ಪಾಗಿ ಮಾತನಾಡಿದ ಕೆಲವು ಸ್ಪರ್ಧಿಗಳಿಗೆ ಸಹಜವಾಗಿಯೇ ತಳಮಳ ಶುರುವಾಗಿದ್ದು, ಕಿಚ್ಚ ಸುದೀಪ್ ಎಲ್ಲಿ ಮುಖವಾಡ ಕಳಚಿಡುತ್ತಾರೋ ಎಂಬ ಭಯ ಕಾಡಿದೆ. ಈ ಮಧ್ಯೆ ವಾಹಿನಿ ಕಲರ್ಸ್​ ಕನ್ನಡ ಪ್ರೊಮೋ ಒಂದನ್ನು ಬಿಟ್ಟು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಸ್ವರ್ಗ ಇರಲಿ, ನರಕಾನೇ ಇರಲಿ ಎಲ್ಲಿದ್ದರೂ ಎಲಿಮಿನೇಷನ್ ತಪ್ಪಿದ್ದಲ್ಲ. ಮನೆಯಿಂದ ಆಚೆ ಹೋಗಲು 9 ಸ್ಪರ್ಧಿಗಳು ನಾಮಿನೇಷನ್ ಆಗಿದ್ದಾರೆ. ಅವರೆಲ್ಲರ ಮೇಲೂ ಎಲಿಮಿನೇಷನ್ ತೂಗುಗತ್ತಿ ಇದೆ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಅದಿತಿ ಪ್ರಭುದೇವ ಮಗಳ ಮುದ್ದಾದ ಫೋಟೋಗಳು ರಿವೀಲ್​ – ಈ ಕ್ಯೂಟಿ ಹೆಸರೇನು ಗೊತ್ತಾ?

 

 

Leave a Comment

DG Ad

RELATED LATEST NEWS

Top Headlines

ಅಶೋಕ್​ ರಾಜೀನಾಮೆ ಕೊಡಲಿ, ತಪ್ಪು ಮಾಡದ ನನ್ನಿಂದ ರಾಜೀನಾಮೆ ಯಾಕ್ ಕೇಳ್ತಾರೆ – ಸಿಎಂ ಸಿದ್ದು..!

ರಾಯಚೂರು : ನಾನು ತಪ್ಪು ಮಾಡಿದ್ದೀನಿ ಅಂತಾ ಕೋರ್ಟ್​ ಹೇಳಿದೆಯಾ..? ತಪ್ಪು ಮಾಡದೇ ನಾನ್ಯಾಕೆ ರಾಜೀನಾಮೆ ಕೊಡಲಿ, ಅಶೋಕ್​ ಮೊದಲು ರಾಜೀನಾಮೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here