ಕಿಚ್ಚನ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮ ಭಾರೀ ಕುತೂಹಲತೆಯಿಂದ ಸಾಗುತ್ತಿದೆ. ಹಾಗಯೇ ‘ಬಿಗ್ ಬಾಸ್ 11’ರ ಮೊದಲ ‘ಕಿಚ್ಚನ ಪಂಚಾಯ್ತಿ’ ಇಂದು ನಡೆಯಲಿದೆ. ಇದಕ್ಕಾಗಿ ಎಲ್ಲರೂ ಕಾದಿದ್ದಾರೆ.
ಮೊದಲ ವಾರವೇ ಬಿಗ್ ಬಾಸ್ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಜಗದೀಶ್, ಯಮುನಾ, ಹಂಸ, ಭವ್ಯಾ, ಗೌತಮಿ, ಚೈತ್ರಾ, ಶಿಶಿರ್, ಮೋಕ್ಷಿತಾ ಹಾಗೂ ಮಾನಸ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ.
ಬಿಗ್ಬಾಸ್ ಸೀಸನ್-11 ಶುರುವಾಗಿ ಒಂದು ವಾರ ಕಳೆದಿದ್ದು, ಈ ಸೀಸನ್ನ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಇಂದು ನಡೆಯುತ್ತಿದೆ. ಒಂದು ವಾರದಲ್ಲಿ ನಡೆದ ಸ್ಪರ್ಧಿಗಳ ಮನರಂಜನೆಯ ಕಥಾವಸ್ತು ಇಟ್ಕೊಂಡು, ಸರಿ, ತಪ್ಪುಗಳ ಬಗ್ಗೆ ಕಿಚ್ಚ ಸುದೀಪ್ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ಈ ವೇಳೆ ಸುದೀಪ್, ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಯಾರಿಗೆಲ್ಲ ಕಿವಿ ಮಾತು ಹೇಳಲಿದ್ದಾರೆ ಅನ್ನೋದ್ರ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡ್ತಿದ್ದು, ರಾತ್ರಿ 9 ಗಂಟೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ತಪ್ಪು ಮಾಡಿದ, ತಪ್ಪಾಗಿ ಮಾತನಾಡಿದ ಕೆಲವು ಸ್ಪರ್ಧಿಗಳಿಗೆ ಸಹಜವಾಗಿಯೇ ತಳಮಳ ಶುರುವಾಗಿದ್ದು, ಕಿಚ್ಚ ಸುದೀಪ್ ಎಲ್ಲಿ ಮುಖವಾಡ ಕಳಚಿಡುತ್ತಾರೋ ಎಂಬ ಭಯ ಕಾಡಿದೆ. ಈ ಮಧ್ಯೆ ವಾಹಿನಿ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಟ್ಟು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಸ್ವರ್ಗ ಇರಲಿ, ನರಕಾನೇ ಇರಲಿ ಎಲ್ಲಿದ್ದರೂ ಎಲಿಮಿನೇಷನ್ ತಪ್ಪಿದ್ದಲ್ಲ. ಮನೆಯಿಂದ ಆಚೆ ಹೋಗಲು 9 ಸ್ಪರ್ಧಿಗಳು ನಾಮಿನೇಷನ್ ಆಗಿದ್ದಾರೆ. ಅವರೆಲ್ಲರ ಮೇಲೂ ಎಲಿಮಿನೇಷನ್ ತೂಗುಗತ್ತಿ ಇದೆ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಅದಿತಿ ಪ್ರಭುದೇವ ಮಗಳ ಮುದ್ದಾದ ಫೋಟೋಗಳು ರಿವೀಲ್ – ಈ ಕ್ಯೂಟಿ ಹೆಸರೇನು ಗೊತ್ತಾ?