ಉಡುಪಿ : ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಗೇಟ್ ಬಳಿ ಕಳೆದ ರಾತ್ರಿ ಬಸ್ವೊಂದು ಧಗಧಗ ಹೊತ್ತಿ ಉರಿದಿದೆ. ಟೋಲ್ ಸಿಬ್ಬಂದಿ ಬೆಂಕಿ ಗಮನಿಸಿ ಡ್ರೈವರ್ಗೆ ತಿಳಿಸಿದ್ದು, ಡ್ರೈವರ್ ತಕ್ಷಣವೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹೊರಕಳಿಸಿದ್ದಾನೆ.
ಸಾರ್ವಜನಿಕರೊಂದಿಗೆ ಸೇರಿ ಬೆಂಕಿ ನಂದಿಸಲು ಟೋಲ್ ಸಿಬ್ಬಂದಿ ಯತ್ನಿಸಿದ್ರು. ಕೊನೆಗೆ ಅದಾನಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಉಡುಪಿ ಕಡೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಮಂಜುನಾಥ ಹೆಸರಿನ ಖಾಸಗಿ ಬಸ್ಸಿನಲ್ಲಿ ಹೆಜಮಾಡಿಯ ಕಿರು ಟೋಲ್ ಗೇಟ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು.
ಬಸ್ಸಿನ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರೊ ಶಂಕೆ ವ್ಯಕ್ತವಾಗಿದೆ. ಡ್ರೈವರ್ ಕೂಡಲೇ ಬಸ್ ನಿಲ್ಲಿಸಿದ್ದರಿಂದ ಪ್ರಯಾಣಿಕರು ಸೇಫ್ ಆಗಿದ್ದು, ಭಾರೀ ಬೆಂಕಿ ದುರಂತವೊಂದು ತಪ್ಪಿದೆ.
ಇದನ್ನೂ ಓದಿ : ಅದಿತಿ ಪ್ರಭುದೇವ ಮಗಳ ಮುದ್ದಾದ ಫೋಟೋಗಳು ರಿವೀಲ್ – ಈ ಕ್ಯೂಟಿ ಹೆಸರೇನು ಗೊತ್ತಾ?
Post Views: 17