ಚಿತ್ರದುರ್ಗ : ಟಿಪ್ಪರ್ ಲಾರಿ ಹರಿದು 30 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಾನುಕೊಂಡ ಹೊರವಲಯದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಘಟನೆಯಲ್ಲಿ 5ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥವಾಗಿದೆ ಎಂದು ತಿಳಿದು ಬಂದಿದೆ.
ಸಾವನ್ನಪ್ಪಿರುವ 30 ಕುರಿಗಳು ಕರಿಯಟ್ಟಿ ಗ್ರಾಮದ ತಿಪ್ಪೇಶ್ ಎಂಬುವವರಿಗೆ ಸೇರಿದ್ದಾಗಿದೆ. ಅಂದಾಜು 5 ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ಘಟನೆ ನಡೆಯೋ ವೇಳೆ ಕುರಿ ಮಾಲೀಕ ತಿಪ್ಪೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರು ಟಿಪ್ಪರ್ನ್ನ ವಶಕ್ಕೆ ಪಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಇದನ್ನೂ ಓದಿ : ಅದಿತಿ ಪ್ರಭುದೇವ ಮಗಳ ಮುದ್ದಾದ ಫೋಟೋಗಳು ರಿವೀಲ್ – ಈ ಕ್ಯೂಟಿ ಹೆಸರೇನು ಗೊತ್ತಾ?
Post Views: 25