ಚಿತ್ರದುರ್ಗ : ತಮ್ಮನ ಪತ್ನಿಯನ್ನ ಮಚ್ಚಿನಿಂದ ಅಣ್ಣ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಾಲಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ. ಕಳೆದ 8 ವರ್ಷದಿಂದ ಹಿಂದೆ ಮೃತ ಈರಕ್ಕನವರ ಗಂಡ ಗೋವಿಂದಪ್ಪ ಸಾವನ್ನಪ್ಪಿದ್ರು. ನಂತರ ಈರಕ್ಕ ಅವ್ರ ತಾಯಿ ಮನೆಯಲ್ಲೇ ವಾಸವಾಗಿದ್ರು.
ಇದೀಗ ಆಸ್ತಿಯಲ್ಲಿ ಭಾಗ ಕೇಳಿದ್ದಕ್ಕೆ ಅಣ್ಣ ಚಂದ್ರಣ್ಣ ಹಾಗೂ ಆತನ ಪುತ್ರ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಆರೋಪಿ ಚಂದ್ರಣ್ಣನನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿದ್ದರು. ನಂತರ ಪೊಲೀಸರು ಆರೋಪಿ ಚಂದ್ರಣ್ಣನನ್ನ ಅರೆಸ್ಟ್ ಮಾಡಿದ್ದಾರೆ. ಸ್ಥಳಕ್ಕೆ ಪರುಶುರಾಂಪುರ ಠಾಣೆ PSI ಬಸವರಾಜ್, ಚಳ್ಳಕೆರೆ DYSP ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣ ಉಪ ಅಖಾಡದಲ್ಲಿ ಮುಂದುವರೆದ ಮೈತ್ರಿ ಟಿಕೆಟ್ ಫೈಟ್..!
Post Views: 383