ರಾಮನಗರ : ಚನ್ನಪಟ್ಟಣ ಉಪಚುನಾವಣೆ ಟಿಕೆಟ್ಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಕ್ಷೇತ್ರದ ಟಿಕೆಟ್ ಅನ್ನು ತಮ್ಮ ಪಕ್ಷಕ್ಕೆ ದಕ್ಕಿಸಿಕೊಳ್ಳೋಕೆ ಚನ್ನಪಟ್ಟಣ ಉಪ ಅಖಾಡದಲ್ಲಿ ಮೈತ್ರಿ ಟಿಕೆಟ್ ಫೈಟ್ ಮುಂದುವರೆದಿದೆ.
ಉಪಚುನಾವಣೆ ಘೋಷಣೆಗೂ ಮುನ್ನವೇ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಮೈತ್ರಿ ಟಿಕೆಟ್ಗಾಗಿ ಜೆಡಿಎಸ್-ಬಿಜೆಪಿ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ತಮ್ಮ-ತಮ್ಮ ನಾಯಕರ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇತ್ತೀಚೆಗೆ ಚನ್ನಪಟ್ಟಣ ಜೆಡಿಎಸ್ ತಾಲೂಕು ಅಧ್ಯಕ್ಷ ಸುದ್ದಿಗೋಷ್ಠಿ ನಡೆಸಿ ನಿಖಿಲ್ಗೆ ಟಿಕೆಟ್ ಎಂದಿದ್ದರು. ಇದೀಗ ಬಿಜೆಪಿ ಮುಖಂಡರಿಂದಲೂ ಪ್ರತ್ಯೇಕ ಸುದ್ದಿಗೋಷ್ಠಿ ನಡೆದಿದೆ.
ಬಿಜೆಪಿಗೆ ಟಿಕೆಟ್ ಕೊಡ್ಬೇಕು CP ಯೋಗೇಶ್ವರ್ ಅಭ್ಯರ್ಥಿ ಆಗ್ಬೇಕು, ಫ್ರೆಂಡ್ಲಿ ಫೈಟ್ಗೂ ನಾವ್ ರೆಡಿ. ನಿಮ್ಮ ಪಕ್ಷದಿಂದಲೂ ಅಭ್ಯರ್ಥಿ ಹಾಕಿ, ನಾವೂ ಅಭ್ಯರ್ಥಿ ಹಾಕ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಚನ್ನಪಟ್ಟಣ ಅಧ್ಯಕ್ಷ ತೂಬಿನಕೆರೆ ರಾಜು ಸವಾಲ್ ಹಾಕಿದ್ದಾರೆ. ಚನ್ನಪಟ್ಟಣ ಬಿಜೆಪಿ-ಜೆಡಿಎಸ್ ಸ್ಥಳೀಯ ನಾಯಕರಲ್ಲಿ ಒಮ್ಮತ ಮೂಡಿದೆ.
ಇದನ್ನೂ ಓದಿ : ಜಿಟಿ ಮಾಲ್ನಲ್ಲಿ ಪಂಚೆ ಹಾಕಿದ್ದಕ್ಕೆ ಬಿಡದೆ ರೈತರಿಗೆ ಅಪಮಾನ – ಸಚಿವ ಕೃಷ್ಣಭೈರೇಗೌಡ ಖಂಡನೆ..!