ಬೆಂಗಳೂರು : ಬೆಂಗಳೂರಿಗೆ ಖತರ್ನಾಕ್ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು, ಹರಿಯಾಣ ಮೂಲದ ಎರಡು ಗ್ಯಾಂಗ್ ನಿಂದ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂ ಹಣ ಕಳವಾಗಿದೆ.
ಕಳ್ಳರು ಇಕೋ ಎರಿಟಿಗ ಕಾರ್ ನಲ್ಲಿ ಬಂದು, ಹೊದಿಕೆಯನ್ನು ಮೈಮೇಲೆ ಹಾಕಿಕೊಂಡು ಎಟಿಎಂ ಒಳಗೆ ಹೋಗಿ ಈ ಕೃತ್ಯವೆಸಗಿದ್ದಾರೆ. ಗುರುತು ಕಾಣಿಸದಂತೆ ಆರೋಪಿಗಳು ಕಳವು ಮಾಡುತ್ತಿದ್ದು, ಕಳ್ಳತನ ವೇಳೆ ಎಟಿಎಂ ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಲೆನ್ಸ್ ಗೆ ಕಪ್ಪು ಬಣ್ಣ ಬಳೆಯುತ್ತಾರೆ. ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಓಪನ್ ಮಾಡಿ ಲಕ್ಷಾಂತರ ಹಣ ಕಳವು ಮಾಡುತ್ತಾರೆ.
ಜು.6 ರಂದು ಬೆಳಗಿನ ಜಾವ 3.30 ಕ್ಕೆ ಈ ಕೃತ್ಯವೆಸಗಿದ್ದು, ಸದ್ಯ ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಸೆರೆಯಾಗಿದೆ. ಈ ಸಂಬಂಧ ಏಜೆನ್ಸಿ ಸಿಬ್ಬಂದಿ ಕಿರಣ್ ಎಂಬುವವರು ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಪ್ರತಿನಿತ್ಯ ರಾತ್ರಿ ವೇಳೆ ನಗರದ ಎಟಿಎಂಗಳ ಸುತ್ತಮುತ್ತಲು ಹೆಚ್ಚಾಗಿ ಗಸ್ತಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ದುರಹಂಕಾರ ತೋರಿಸಿದ ಐಪಿಎಸ್ ಅಧಿಕಾರಿ ವಿರುದ್ಧ ಡಿಜಿಪಿಗೆ ದೂರು..!