Download Our App

Follow us

Home » ಜಿಲ್ಲೆ » ಭರ್ಜರಿ ಮಳೆ : ಒಂದೇ ವಾರದಲ್ಲಿ 100 ಅಡಿ ಗಡಿ ದಾಟಿದ ಕೆಆರ್‌ಎಸ್ ನೀರಿನ ಮಟ್ಟ..!

ಭರ್ಜರಿ ಮಳೆ : ಒಂದೇ ವಾರದಲ್ಲಿ 100 ಅಡಿ ಗಡಿ ದಾಟಿದ ಕೆಆರ್‌ಎಸ್ ನೀರಿನ ಮಟ್ಟ..!

ಮಂಡ್ಯ : ಕಾವೇರಿ ಜಲಾನಯನ‌ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಕೆಆರ್‌ಎಸ್ ಅಣೆಕಟ್ಟೆಗೆ 8,425 ಕ್ಯೂಸೆಕ್ ಭರ್ಜರಿ ಒಳಹರಿವು ಬಂದಿದೆ. ಪರಿಣಾಮ ಒಂದೇ ವಾರದಲ್ಲಿ ಕೃಷ್ಣರಾಜ ಸಾಗರ  ಜಲಾಶಯದ ನೀರಿನ ಮಟ್ಟ100 ಅಡಿಗಳನ್ನು ದಾಟಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ :

  • ಗರಿಷ್ಠ ಮಟ್ಟ – 124.80 ಅಡಿ.
  • ಇಂದಿನ ಮಟ್ಟ – 102.80 ಅಡಿ.
  • ಗರಿಷ್ಠ ಸಾಂದ್ರತೆ – 49.452 ಟಿಎಂಸಿ
  • ಇಂದಿನ ಸಾಂದ್ರತೆ – 25.085 ಟಿಎಂಸಿ
  • ಒಳ ಹರಿವು – 8,425 ಕ್ಯೂಸೆಕ್
  • ಹೊರ ಹರಿವು – 567 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 78.4 ಅಡಿಗಳಷ್ಟಿತ್ತು, ಕಳೆದ ಒಂದು ವಾರದ ಹಿಂದೆ ಅಂದರೆ ಜೂನ್ 28ರಂದು ಜಲಾಶಯದ ಮಟ್ಟ 90.28 ಅಡಿ ಇತ್ತು. ಕಾವೇರಿ ನದಿಯ ಜಲಾನಯನ ಪ್ರದೇಶವಾಗಿರುವ ಭಾಗಮಂಡಲ ಸೇರಿದಂತೆ ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಜಲಾಶಯದ ಮಟ್ಟ ಏರಿಕೆಯಾಗಿದೆ. ಭಾಗಮಂಡಲ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 211 ಮಿಮೀ ಮಳೆ ದಾಖಲಾಗಿದ್ದು, ಕೊಡಗಿನ ಹಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ – ಕೊಲೆ ಮಾಡಿ ಆಗುಂಬೆ ಅರಣ್ಯದಲ್ಲಿ ಮೃತದೇಹ ಎಸೆದ ಪ್ರಿಯಕರ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here