ಬೆಂಗಳೂರು : ದಿನೇ ದಿನೇ ಡೆಂಘೀ ಸೋಂಕು ಉಲ್ಭಣಗೊಳ್ಳುತ್ತಿದ್ದು, ಈವರೆಗೆ ರಾಜ್ಯದಲ್ಲಿ ಡೆಂಗ್ಯೂ ಕೇಸ್ 7000 ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಟೆಸ್ಟ್ನನ್ನು ಉಚಿತವಾಗಿ ಮಾಡ್ಬೇಕೆಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ , ರೋಗಿಗಳ ಆರೋಗ್ಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡ ಬಳಿಕ ಈ ಬಗ್ಗೆ ಮಾತನಾಡಿದ ಆರ್.ಅಶೋಕ್ ಅವರು, ಜನ ಟೆಸ್ಟ್ ಮಾಡಿಸಿಕೊಳ್ಳದೇ ಇರೋದ್ರಿಂದ ಡೆಂಗ್ಯೂ ಹೆಚ್ಚಾಗ್ತಿದೆ. ನಮ್ಮ ಸರ್ಕಾರದ ಸಮಯದಲ್ಲಿ ಉಚಿತ ಕೊರೋನಾ ಟೆಸ್ಟ್ ಮಾಡಿಸಿದ್ವಿ. ಅದೇ ರೀತಿ ನೀವೂ ಕೂಡಾ ಡೆಂಗ್ಯೂ ಟೆಸ್ಟಿಂಗ್ ಉಚಿತವಾಗಿ ಮಾಡಿಸಿ. ಆಮೇಲೆ ಅದಕ್ಕೂ ಟ್ಯಾಕ್ಸ್ ಹಾಕ್ಬೇಡಿ ಎಂದಿದ್ದಾರೆ.
ಇನ್ನು ಡೆಂಗ್ಯೂ ಟೆಸ್ಟಿಂಗ್ಗೆ 10 ಕೋಟಿ ಖರ್ಚಾಗುತ್ತಾ ಮಾಡಿ. ಸರ್ಕಾರವೇ ಜನರಿಗೆ ಅಭಯ ನೀಡ್ಬೇಕು. ಡೆಂಗ್ಯೂ ಎಮರ್ಜೆನ್ಸಿ ಅಂತಾ ಸರ್ಕಾರ ಘೋಷಣೆ ಮಾಡಿ, ಜನರ ರಕ್ಷಣೆ ಮಾಡಿ ಎಂದು
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಡಿ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ – FSL ಪರೀಕ್ಷೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ..!