ಕೋಲಾರ : ಕರ್ನಾಟಕದಲ್ಲೇ ನಂಬರ್ ಒನ್ ಕರೆಪ್ಟ್ ಆಗಿದ್ದ ADLR ಅಶ್ವಿನಿ ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಶ್ವಿನಿ ಸರ್ವೆ ಹಾಗೂ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕಿಯಾಗಿದ್ದು, ಒಂದು ಫೈಲ್ ಟಚ್ ಮಾಡಬೇಕಂದ್ರೆ 50 ಸಾವಿರದಿಂದ 1 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಈ ಹಿಂದೆ ಪೋಸ್ಟಿಂಗ್ಗೆ 1 ಕೋಟಿ ಕೊಟ್ಟು ಬಂದಿದ್ದೀನಿ ಅಂತಾ ಅಶ್ವಿನಿ ಕೊಚ್ಚಿಕೊಂಡಿದ್ದರು.
ಲೋಕಾಯುಕ್ತ ಅಧಿಕಾರಿಗಳು ADLR ಅಶ್ವಿನಿ ಮೇಲೆ 3 ತಿಂಗಳಿಂದ ಕಣ್ಣಿಟ್ಟಿದ್ದರು. ಕೊನೆಗೂ ಬಡಾವಣೆ ಭೂ ಪರಿವರ್ತನೆಗಾಗಿ 30 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸುವಾಗ ಅಧಿಕಾರಿಗಳಿಗೆ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭೂ ದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕಿ ಅಶ್ವಿನಿ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಎಂಬ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ.
ಇವರಿಬ್ಬರು ಮಾಲೂರಿನ ಕಡತೂರು ಗ್ರಾಮದ ಕಾಮಣ್ಣ ಬಳಿ ಇರೋ ಭೂಪರಿವರ್ತನೆಗಾಗಿ KR ಪುರಂ ಬಳಿಯ A2b ರೆಸ್ಟೋರೆಂಟ್ನಲ್ಲಿ 10 ಸಾವಿರ ಮುಂಗಡ ಲಂಚ ಪಡೆದಿದ್ದರು. ಉಳಿದ 20 ಸಾವಿರ ಹಣ RI ಮಂಜುನಾಥ್ಗೆ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ತನಿಖೆಗೆ ED ಎಂಟ್ರಿ..!