Download Our App

Follow us

Home » ಅಪರಾಧ » ದರ್ಶನ್​​​​​​​ ಕೇಸ್​ನಲ್ಲಿ ಮತ್ತಿಬ್ಬರಿಗೆ ಬುಲಾವ್ – ಮೋಹನ್​ ರಾಜ್​ ಬೆನ್ನಲ್ಲೇ ಇನ್ನಿಬ್ಬರಿಗೆ ನೋಟಿಸ್​​ ಜಾರಿ..!

ದರ್ಶನ್​​​​​​​ ಕೇಸ್​ನಲ್ಲಿ ಮತ್ತಿಬ್ಬರಿಗೆ ಬುಲಾವ್ – ಮೋಹನ್​ ರಾಜ್​ ಬೆನ್ನಲ್ಲೇ ಇನ್ನಿಬ್ಬರಿಗೆ ನೋಟಿಸ್​​ ಜಾರಿ..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ತನಿಖೆ ವೇಳೆ ಪೊಲೀಸರು ಆರೋಪಿ ನಟ ದರ್ಶನ್‌ ಬಳಿ 40 ಲಕ್ಷ ರು. ನಗದು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಈ ಹಣವನ್ನು ಮಾಜಿ ಉಪಮೇಯರ್‌ ಮೋಹನ್‌ ರಾಜ್‌ ಬಳಿ ಪಡೆದಿದ್ದಾಗಿ ದರ್ಶನ್‌ ಹೇಳಿಕೆ ನೀಡಿದ್ದರು. ಹೀಗಾಗಿ ದರ್ಶನ್ ಅವರಿಗೆ ಹಣ ಕೊಟ್ಟ ಆರೋಪ ಎದುರಿಸುತ್ತಿದ್ದ ಮೋಹನ್ ರಾಜ್ ಅವರು ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು.

ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಇಂಚಿಂಚೂ ಕೆದಕುತ್ತಿರುವ ಪೊಲೀಸರು, ಮೋಹನ್​ ರಾಜ್​ ಬೆನ್ನಲ್ಲೇ ಇನ್ನಿಬ್ಬರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್​​ ನೀಡಿದ್ದಾರೆ. ಇಂದು ಮತ್ತೆ ಇಬ್ಬರ ವಿಚಾರಣೆ ನಡೆಸಲಿರುವ ಪೊಲೀಸರು ಬೆಂಗಳೂರು ನಗರದ ಪ್ರಭಾವಿ MLA ಕಾರು ಡ್ರೈವರ್​​ ಕಾರ್ತಿಕ್​​ ಹಾಗೂ ಡೆವಿಲ್​ ಸಿನಿಮಾದ ಡೈರೆಕ್ಟರ್​ ಮಿಲನ ಪ್ರಕಾಶ್​ಗೆ ನೋಟಿಸ್​ ನೀಡಿದ್ದಾರೆ.

ACP ಚಂದನ್​​ ಕುಮಾರ್​ ನೇತೃತ್ವದಲ್ಲಿ ಬಸವೇಶ್ವರನಗರ ಠಾಣೆ ಕಟ್ಟಡದಲ್ಲಿರುವ ACP ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಡೆವಿಲ್ ಸಿನಿಮಾದ ಶೂಟಿಂಗ್​ಗೆ ತೆರಳಿದ ವೇಳೆ ದರ್ಶನ್​​​ರನ್ನು ಅರೆಸ್ಟ್ ಮಾಡಲಾಗಿತ್ತು. ಹೀಗಾಗಿ ಹಣಕಾಸಿನ ವ್ಯವಹಾರ ಸಂಬಂಧ ACP ಚಂದನ್ ಇನ್ನಿಬ್ಬರ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ : ಉತ್ತರ ಕನ್ನಡ, ಕರಾವಳಿ ಭಾಗದಲ್ಲಿ ಮುಂದುವರೆದ ವರುಣನ ಆರ್ಭಟ : ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ..!

Leave a Comment

DG Ad

RELATED LATEST NEWS

Top Headlines

ದರ್ಶನ್​ ಕೇಸ್​ನ​​ಲ್ಲಿ ಪೊಲೀಸರಿಂದ ಮಿಸ್ಟೇಕ್​​​ ಮೇಲೆ ಮಿಸ್ಟೇಕ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಕೀಲ ಸಿ.ವಿ. ನಾಗೇಶ್..!

ಬೆಂಗಳೂರು : ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು 57ನೇ ಸಿಸಿಹೆಚ್ ಕೋರ್ಟ್​​ನಲ್ಲಿ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ

Live Cricket

Add Your Heading Text Here