ಬೆಂಗಳೂರು : ದರ್ಶನ್ಗೆ ಹಣ ನೀಡಿದ್ದ ಮೋಹನ್ ರಾಜ್ಗೆ 2ನೇ ನೋಟಿಸ್ ಜಾರಿಯಾಗಿದೆ. ಬಿಬಿಎಂಪಿ ಮಾಜಿ ಉಪ ಮೇಯರ್ಗೆ ಇದೀಗ ವಿಚಾರಣೆ ಸಂಕಷ್ಟ ಎದುರಾಗಿದ್ದು, ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ಮೋಹನ್ ರಾಜ್ ಹಣ ನೀಡಿದ್ದ ಆರೋಪ ಕೇಳಿಬಂದಿದೆ. ಈಗಾಗಲೇ ಪೊಲೀಸರು ಮೂವರಿಗೆ ನೋಟಿಸ್ ನೀಡಿದ್ದು, ಮಾಜಿ ಉಪಮೇಯರ್ ಮೋಹನ್ ರಾಜ್ಗೆ ಇದೀಗ 2ನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ.
ದರ್ಶನ್ಗೆ 40 ಲಕ್ಷ ಹಣ ನೀಡಿದ್ದ ಮೋಹನ್ ರಾಜ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಲು ನೋಟಿಸ್ ನೀಡಿದ್ದಾರೆ. ವಿಚಾರಣೆ ವೇಳೆ ದರ್ಶನ್, ಮೋಹನ್ರಾಜ್ ಬಳಿ 40 ಲಕ್ಷ ಹಣ ಪಡೆದ ರಹಸ್ಯ ಹೇಳಿದ್ದಾರೆ. ಯಾವ ಉದ್ದೇಶಕ್ಕಾಗಿ ನಟ ದರ್ಶನ್ಗೆ ಹಣ ನೀಡಿದ್ರು..? ಈ ಕಾರಣ ತಿಳಿಯಲು ಮೋಹನ್ರಾಜ್ಗೆ ಪೊಲೀಸ್ ನೋಟಿಸ್ ಜಾರಿಮಾಡಿದ್ದಾರೆ. ಪ್ರಕರಣ ಸಂಬಂಧ ಪವಿತ್ರಾಗೌಡ ಸ್ನೇಹಿತೆ ಸಮತಗೂ ನೋಟಿಸ್ ನೀಡಲಾಗಿದೆ.
ಆರೋಪಿಯೊಬ್ಬನಿಗೆ ಹಣಕಾಸಿನ ಸಹಾಯ ಮಾಡಿರೋ ಆರೋಪದ ಮೇಲೆ ಬೆಂಗಳೂರಿನ ಪ್ರಭಾವಿ ಶಾಸಕರ ಕಾರು ಚಾಲಕ ಕಾರ್ತಿಕ್ ಪುರೋಹಿತ್ಗೂ ನೋಟಿಸ್ ಜಾರಿಯಾಗಿದೆ. ಹತ್ಯೆ ಕೇಸ್ ಆರೋಪಿ ಪ್ರದೋಷ್ಗೆ ಆಪ್ತನಾಗಿರುವ ಕಾರ್ತಿಕ್ ಪುರೋಹಿತ್ ನೋಟಿಸ್ ತಲುಪಿದ ಕೂಡಲೇ ಎಸ್ಕೇಪ್ ಆಗಿದ್ದಾನೆ. ರಿಮ್ಯಾಂಡ್ ಅರ್ಜಿಯಲ್ಲಿ ಈ ಎಲ್ಲಾ ಅಂಶಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ಆತ್ಮಹ*ತ್ಯೆ..!