Download Our App

Follow us

Home » ಅಪರಾಧ » ದರ್ಶನ್​ಗೆ ಹಣ ನೀಡಿದ್ದ BBMP ಮಾಜಿ ಉಪ ಮೇಯರ್ ಮೋಹನ್​ ರಾಜ್​ಗೆ ಮತ್ತೆ ನೋಟಿಸ್ ಜಾರಿ..!

ದರ್ಶನ್​ಗೆ ಹಣ ನೀಡಿದ್ದ BBMP ಮಾಜಿ ಉಪ ಮೇಯರ್ ಮೋಹನ್​ ರಾಜ್​ಗೆ ಮತ್ತೆ ನೋಟಿಸ್ ಜಾರಿ..!

ಬೆಂಗಳೂರು : ದರ್ಶನ್​ಗೆ ಹಣ ನೀಡಿದ್ದ ಮೋಹನ್​ ರಾಜ್​ಗೆ 2ನೇ ನೋಟಿಸ್​ ಜಾರಿಯಾಗಿದೆ. ಬಿಬಿಎಂಪಿ ಮಾಜಿ ಉಪ ಮೇಯರ್​ಗೆ ಇದೀಗ ವಿಚಾರಣೆ ಸಂಕಷ್ಟ ಎದುರಾಗಿದ್ದು, ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ಗೆ ಮೋಹನ್​ ರಾಜ್ ಹಣ ನೀಡಿದ್ದ ಆರೋಪ ಕೇಳಿಬಂದಿದೆ. ಈಗಾಗಲೇ ಪೊಲೀಸರು ಮೂವರಿಗೆ ನೋಟಿಸ್ ನೀಡಿದ್ದು, ಮಾಜಿ ಉಪಮೇಯರ್ ಮೋಹನ್ ರಾಜ್​​ಗೆ ಇದೀಗ 2ನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ.

ದರ್ಶನ್​ಗೆ 40 ಲಕ್ಷ ಹಣ ನೀಡಿದ್ದ ಮೋಹನ್ ರಾಜ್​ಗೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಲು ನೋಟಿಸ್ ನೀಡಿದ್ದಾರೆ. ವಿಚಾರಣೆ ವೇಳೆ ದರ್ಶನ್, ಮೋಹನ್​ರಾಜ್​ ಬಳಿ​​​ 40 ಲಕ್ಷ ಹಣ ಪಡೆದ ರಹಸ್ಯ ಹೇಳಿದ್ದಾರೆ. ಯಾವ ಉದ್ದೇಶಕ್ಕಾಗಿ ನಟ ದರ್ಶನ್​ಗೆ ಹಣ ನೀಡಿದ್ರು..? ಈ ಕಾರಣ ತಿಳಿಯಲು ಮೋಹನ್​ರಾಜ್​​​ಗೆ ಪೊಲೀಸ್​ ನೋಟಿಸ್ ಜಾರಿಮಾಡಿದ್ದಾರೆ. ಪ್ರಕರಣ ಸಂಬಂಧ ಪವಿತ್ರಾಗೌಡ ಸ್ನೇಹಿತೆ ಸಮತಗೂ ನೋಟಿಸ್ ನೀಡಲಾಗಿದೆ.

ಆರೋಪಿಯೊಬ್ಬನಿಗೆ ಹಣಕಾಸಿನ ಸಹಾಯ ಮಾಡಿರೋ ಆರೋಪದ ಮೇಲೆ ಬೆಂಗಳೂರಿನ ಪ್ರಭಾವಿ ಶಾಸಕರ ಕಾರು ಚಾಲಕ ಕಾರ್ತಿಕ್ ಪುರೋಹಿತ್​​ಗೂ ನೋಟಿಸ್ ಜಾರಿಯಾಗಿದೆ. ಹತ್ಯೆ ಕೇಸ್ ಆರೋಪಿ ಪ್ರದೋಷ್​ಗೆ ಆಪ್ತನಾಗಿರುವ ಕಾರ್ತಿಕ್ ಪುರೋಹಿತ್ ನೋಟಿಸ್ ತಲುಪಿದ ಕೂಡಲೇ ಎಸ್ಕೇಪ್ ಆಗಿದ್ದಾನೆ. ರಿಮ್ಯಾಂಡ್​ ಅರ್ಜಿಯಲ್ಲಿ ಈ ಎಲ್ಲಾ ಅಂಶಗಳನ್ನು ಪೊಲೀಸರು  ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ಆತ್ಮಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here