ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಹನ್ನೊಂದು ದಿನಗಳು ಕಳೆದಿವೆ. ಕೊಲೆ ಆರೋಪದಲ್ಲಿ ದರ್ಶನ್ ಜೈಲು ಪಾಲಾಗಿದ್ದರೂ ಅವರ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಅಭಿಮಾನಿಗಳು ದರ್ಶನ್ ಪರವಾಗಿ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರುತ್ತಲೇ ಇದ್ದಾರೆ.
ಮಕ್ಕಳಿಗೆ ಕೃಷ್ಣ, ರಾಮ, ಸ್ವಾಮಿ ವಿವೇಕಾನಂದ ವೇಷ ಹಾಕೋದು ಕಾಮನ್ ಆಗಿದೆ. ಆದರೆ ಇಲ್ಲೊಬ್ಬ ದರ್ಶನ್ ಮೇಲಿನ ಅಭಿಮಾನಕ್ಕೆ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾನೆ. ಹೌದು.. ಮಗುವಿಗೆ ದರ್ಶನ್ ಖೈದಿ ನಂಬರ್ ಹಾಕಿ ಫೋಟೋಶೂಟ್ ಮಾಡಿಸಿರುವ ಘಟನೆಯೊಂದು ನಡೆದಿದೆ.
ಅಭಿಮಾನ ಇರಬೇಕು ಅಂಧಾಭಿಮಾನ, ಹುಚ್ಚು ಅಭಿಮಾನ ಇರಬಾರದು. ದರ್ಶನ್ ಮೇಲಿನ ಅಭಿಮಾನದ ಹುಚ್ಚು ಮಿತಿಮೀರಿ ಹೋಗಿದೆ. ಅಭಿಮಾನಿಯೊಬ್ಬ ತನ್ನ 1 ವರ್ಷದ ಮಗುವಿಗೆ ಬಿಳಿ ಬಟ್ಟೆ ಮೇಲೆ 6106 ನಂಬರ್ ಹಾಕಿ ಫೋಟೋಶೂಟ್ ಮಾಡಿಸಿದ್ದಾನೆ. ಇದೀಗ ಮಗುವಿನ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ : ತಾಯಿಯಾಗ್ತಿರೋ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ – ವಿಭಿನ್ನ ಫೋಟೋಶೂಟ್ ಮೂಲಕ ಗಮನ ಸೆಳೆದ ಕೊಡಗಿನ ಜೋಡಿ..!