Download Our App

Follow us

Home » ಮೆಟ್ರೋ » ದರ್ಶನ್​ ಮೇಲಿನ ಅಂಧಾಭಿಮಾನದ ಎಫೆಕ್ಟ್ : ಮಗುವಿಗೆ​​ ಖೈದಿ ನಂಬರ್​​​ ಹಾಕಿ ಫೋಟೋಶೂಟ್​​..!

ದರ್ಶನ್​ ಮೇಲಿನ ಅಂಧಾಭಿಮಾನದ ಎಫೆಕ್ಟ್ : ಮಗುವಿಗೆ​​ ಖೈದಿ ನಂಬರ್​​​ ಹಾಕಿ ಫೋಟೋಶೂಟ್​​..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಹನ್ನೊಂದು ದಿನಗಳು ಕಳೆದಿವೆ. ಕೊಲೆ ಆರೋಪದಲ್ಲಿ ದರ್ಶನ್ ಜೈಲು  ಪಾಲಾಗಿದ್ದರೂ ಅವರ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಅಭಿಮಾನಿಗಳು ದರ್ಶನ್ ಪರವಾಗಿ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರುತ್ತಲೇ ಇದ್ದಾರೆ.

ಮಕ್ಕಳಿಗೆ ಕೃಷ್ಣ, ರಾಮ, ಸ್ವಾಮಿ ವಿವೇಕಾನಂದ ವೇಷ ಹಾಕೋದು ಕಾಮನ್ ಆಗಿದೆ. ಆದರೆ ಇಲ್ಲೊಬ್ಬ ದರ್ಶನ್​ ಮೇಲಿನ ಅಭಿಮಾನಕ್ಕೆ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾನೆ. ಹೌದು.. ಮಗುವಿಗೆ ದರ್ಶನ್​​ ಖೈದಿ ನಂಬರ್​​​ ಹಾಕಿ ಫೋಟೋಶೂಟ್​​ ಮಾಡಿಸಿರುವ ಘಟನೆಯೊಂದು ನಡೆದಿದೆ.

ಅಭಿಮಾನ ಇರಬೇಕು ಅಂಧಾಭಿಮಾನ, ಹುಚ್ಚು ಅಭಿಮಾನ ಇರಬಾರದು. ದರ್ಶನ್​​​​ ಮೇಲಿನ ಅಭಿಮಾನದ ಹುಚ್ಚು ಮಿತಿಮೀರಿ ಹೋಗಿದೆ. ಅಭಿಮಾನಿಯೊಬ್ಬ ತನ್ನ 1 ವರ್ಷದ ಮಗುವಿಗೆ ಬಿಳಿ ಬಟ್ಟೆ ಮೇಲೆ 6106 ನಂಬರ್​​​​​​​​​ ಹಾಕಿ ಫೋಟೋಶೂಟ್​​ ಮಾಡಿಸಿದ್ದಾನೆ. ಇದೀಗ ಮಗುವಿನ ಫೋಟೋಶೂಟ್​​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ.

ಇದನ್ನೂ ಓದಿ : ತಾಯಿಯಾಗ್ತಿರೋ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ – ವಿಭಿನ್ನ ಫೋಟೋಶೂಟ್ ಮೂಲಕ ಗಮನ ಸೆಳೆದ ಕೊಡಗಿನ ಜೋಡಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here