ಬೆಂಗಳೂರು : ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಈಗ ಜೈಲು ವಾಸದಲ್ಲಿದ್ದಾರೆ. ಕಳೆದ 13 ವರ್ಷಗಳ ಹಿಂದೆ ಕೌಟುಂಬಿಕ ಕಲಹದಿಂದ ಸೆರೆ ಹಿಂದೆ ಸೇರಿದ್ದ ನಟನೀಗ ಮತ್ತೊಮ್ಮೆ ಜೈಲುವಾಸ ಶುರು ಮಾಡಿದ್ದಾರೆ.
ಹೌದು, ಹೆಣ್ಣಿನಿಂದಲೇ ಪದೇ ಪದೇ ಸುದ್ದಿಯಾಗಿದ್ದ ನಟ ದರ್ಶನ್ ಇದೀಗ ಕೊಲೆ ಕೇಸ್ನಲ್ಲಿ ಸಿಲುಕಿದ್ದಾರೆ. ಕಂಬಿ ಹಿಂದೆ ಬಂಧಿಯಾಗಿರುವ ದರ್ಶನ್ ಸುತ್ತ ಟೀಕೆ, ಆಕ್ರೋಶದ ಸುಳಿ ಸುತ್ತಿಕೊಂಡಿದೆ. ಇನ್ನು ಈ ಕೇಸ್ ವಿಚಾರಣೆ ಮುಗಿದು ಯಾರು ಅಪರಾಧಿ-ಯಾರು ನಿರಪರಾಧಿ ಎಂಬುದು ಘೋಷಣೆ ಆಗುವವರೆಗೂ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಹೀಗಿರುವಾಗಲೇ ದರ್ಶನ್ ಹಾಗೂ ನಟಿ ಅಮೂಲ್ಯ ಜೋಡಿಯ ಸಿನಿಮಾವೊಂದು ಇಷ್ಟೊತ್ತಿಗೆ ತೆರೆಗೆ ಬರಬೇಕಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಆದರೆ ಯಾಕೆ ಈ ಸಿನಿಮಾ ಬರಲಿಲ್ಲ ಎಂಬ ರಹಸ್ಯ ಇದೀಗ ಹೊರಬಿದ್ದಿದೆ.
ಈ ಬಗ್ಗೆ ಖ್ಯಾತ ಬರಹಗಾರ, ನಿರ್ದೇಶಕರೂಬ್ಬರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. “ನನ್ನ ಸಿನಿಮಾವೊಂದಕ್ಕೆ ದರ್ಶನ್ ಕಾಲ್ಶೀಟ್ ಪಡೆದುಕೊಂಡಿದ್ದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿ ಅಮೂಲ್ಯ ಅವರನ್ನು ದರ್ಶನ್ಗೆ ಜೋಡಿಯಾಗಿ ಆಯ್ಕೆ ಮಾಡಲು ನಾನು ನಿರ್ಧರಿಸಿದ್ದೆ. ಅದನ್ನು ದರ್ಶನ್ ಅವರಿಗೂ ಹೇಳಿದ್ದೆ ಎಂದಿದ್ದಾರೆ.
ನನ್ನ ಮಾತನ್ನು ಕೇಳಿ ನಟ ದರ್ಶನ್ ಅತ್ಯಂತ ವಿನಯದಿಂದ ‘ಗುರುಗಳೇ ಅಮೂಲ್ಯ ಬೇಡ. ನಾನು ಅವಳನ್ನು ಚಿಕ್ಕ ಮಗುವಿನಿಂದಲೂ ನೋಡಿದ್ದೇನೆ. ನನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಎತ್ತಿ ಆಡಿಸಿದ್ದೇನೆ. ಅಂಥ ಮಗುವನ್ನು ನನ್ನ ಸಿನಿಮಾಗೆ ನಾಯಕಿಯಾಗಿ ನೋಡಲು ನನ್ನಿಂದ ಆಗದು.
ಆಕೆಯನ್ನು ನಾಯಕಿ ಜಾಗದಲ್ಲಿ ನೋಡುವುದರು ಹಾಗಿರಲಿ, ರೊಮ್ಯಾಂಟಿಕ್ ಸೀನ್ ಇದ್ದಾಗ ಆಕೆಯ ಕೈಯನ್ನು ಆ ಮೂಡ್ನಲ್ಲಿ ಟಚ್ ಮಾಡಲು ಕೂಡ ನಾನು ಬಯಸುವುದಿಲ್ಲ. ದಯವಿಟ್ಟು ನನ್ನ ಎದುರು ಅಮೂಲ್ಯ ಹೀರೋಯಿನ್ ಆಗಿ ಬೇಡ’ ಎಂದು ಅತ್ಯಂತ ವಿನಯದಿಂದ ಹೇಳಿದ್ದರು’ ಎಂದಿದ್ದಾರೆ.
ಇದನ್ನೂ ಓದಿ : ಪೋಕ್ಸೋ ಪ್ರಕರಣ : ಮಾಜಿ ಸಿಎಂ ಬಿಎಸ್ವೈ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಸಿಐಡಿ..