ಬೆಂಗಳೂರು : ಕಾಂಗ್ರೆಸ್ MLAಗೆ ಕೋಟಿ-ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ಮೇಲ್ ಮಾಡ್ತಿದ್ದ ವಂಚಕರು CCB ಬಲೆಗೆ ಬಿದಿದ್ದಾರೆ. ಮೈಸೂರು ಮೂಲದ ಸಂತೋಷ್, ಪುಟ್ಟರಾಜು ಬಂಧಿತ ಆರೋಪಿಗಳು. ಆರೋಪಿಗಳ ಗ್ಯಾಂಗ್ನಲ್ಲಿ ಓರ್ವ ಯುವತಿಯೂ ಶಾಮೀಲಾಗಿರುವುದು ತಿಳಿದು ಬಂದಿದೆ.
ಆರೋಪಿಗಳು ಪ್ರಭಾವಿಗಳನ್ನು ಸಂಪರ್ಕಿಸಿ ಫಾಲೋ ಮಾಡುತ್ತಿದ್ದರು. ಬಳಿಕ VIPಗಳನ್ನು ಭೇಟಿ ಮಾಡಿ ನಂಬರ್ ಪಡೆದು, VIPಗಳು ಹೋಟೆನಲ್ಲಿ ಉಳಿದು ಖಾಲಿ ಮಾಡ್ತಿದ್ದ ರೂಂ ಇವ್ರು ಬಾಡಿಗೆ ಪಡೆಯುತ್ತಿದ್ದರು. ನಂತರ ರೂಂನಲ್ಲಿ ಯುವತಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡ್ತಿದ್ದ ಗ್ಯಾಂಗ್ ಹಿಡನ್ ಕ್ಯಾಮರ್ ಇಟ್ಟ ರೀತಿಯಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ನಂತರ ವಿಡಿಯೋ ಕಳಿಸಿ ನಿಮ್ಮದೇ ವೀಡಿಯೋ ಎಂದು ಬೆದರಿಸಿ, ಕೋಟ್ಯಾಂತರ ರೂ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಅದೇ ರೀತಿ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡಗೂ ಗ್ಯಾಂಗ್ ಬ್ಲಾಕ್ ಮೇಲ್ ಮಾಡುತ್ತಿತ್ತು. ಬ್ಲಾಕ್ ಮೇಲ್ ಮಾಡ್ತಿದ್ದಂತೆ ಹರೀಶ್ ಗೌಡ ದೂರು ನೀಡಿದ್ದರು. ಸಿಸಿಬಿ ಪೊಲೀಸ್ ಠಾಣೆಯಲ್ಲೆ ಕೇಸ್ ದಾಖಲಿಸಿ ತನಿಖೆ ಶುರುಮಾಡಿದ ಪೊಲೀಸರು ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ವಿವಿಯೊಂದರ ಉಪಕುಲಪತಿಗೂ ವಂಚಕರು ಬ್ಲಾಕ್ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಹೆಚ್ಚುವರಿ ಡಿಸಿಎಂಗಳನ್ನು ಮಾಡೋದಾದ್ರೆ ಡಿಕೆಶಿಯನ್ನು ಸಿಎಂ ಮಾಡಿ : ಶಿವಗಂಗ ಬಸವರಾಜ್ ಸ್ಫೋಟಕ ಹೇಳಿಕೆ..!