ಮೈಸೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ಗೆ ಜು.4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ಗೆ ವಿಚಾರನಾಧೀನ ಕೈದಿ ನಂಬರ್ ನೀಡಿದ್ದಾರೆ. ಇದೀಗ ದರ್ಶನ್ ಅಭಿಮಾನಿಯೊಬ್ಬ ಬೈಕ್ ಮೇಲೆ ದರ್ಶನ್ ಕೈದಿ ನಂಬರ್ 6106 ನ್ನು ಹಾಕಿಕೊಂಡಿದ್ದಾನೆ.
ತಿ.ನರಸೀಪುರ ತಾಲೂಕಿನ ಕರುಹಟ್ಟಿ ಗ್ರಾಮದ ರಾಜೇಶ್ ಎಂಬ ವ್ಯಕ್ತಿ ತನ್ನ ದ್ವಿಚಕ್ರವಾಹನಕ್ಕೆ ದರ್ಶನ್ ಕೈದಿ ನಂಬರ್ ಹಾಕಿಕೊಂಡಿದ್ದಾನೆ. ನಟ ದರ್ಶನ್ ಅಪ್ಪಟ ಅಭಿಮಾನಿಯಾಗಿರುವ ರಾಜೇಶ್ ಇದೇ ಲಕ್ಕಿ ನಂಬರ್ ಎಂದು ಗಾಡಿ ಮೇಲೆ ಬರೆಸಿಕೊಂಡಿದ್ದಾನೆ. ಗಾಡಿ ಮೇಲೆ ಕೈದಿ 6106, ಬೇಡಿ ಚಿತ್ರ ಹಾಕಿಸಿದ್ದಾನೆ.
ರಾಜೇಶ್ ದ್ವಿಚಕ್ರವಾಹನಕ್ಕೆ ಈಗಾಗಲೇ ಬೇರೆ ನಂಬರ್ ಇದೆ, ಅದರ ಜೊತೆಗೆ 6106 ನಂಬರ್ ಬರೆಸಿಕೊಂಡಿದ್ದಾನೆ. ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ಮೇಲೆ ಹೊಸ ಖಯಾಲಿ ಶುರುವಾಗಿದ್ದು, ಅಂಧಾಭಿಮಾನಿಗಳು ಕೈದಿ ನಂಬರನ್ನೂ ಬಿಡದೇ ಬಳಸಿಕೊಳ್ತಿದ್ದಾರೆ.
ಇದನ್ನೂ ಓದಿ : ‘ಶತಭಿಷ’ ಚಿತ್ರದ ಟ್ರೈಲರ್ ರಿಲೀಸ್ : ಜೂನ್ನಲ್ಲೇ ಸಿನಿಮಾ ತೆರೆಗೆ ಬರಲು ಸಿದ್ದ..!