ಬೆಂಗಳೂರು : ಸೂರಜ್ ರೇವಣ್ಣ ವಿರುದ್ಧ ಹಾಸನದಲ್ಲಿ ಸಲಿಂಗಕಾಮದ ಕೇಸ್ ದಾಖಲಾಗುತ್ತಿದ್ದಂತೆ ಬಂಧಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ರಾಜ್ಯ ಸರ್ಕಾರದಿಂದ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ನೀಡಲಾಗಿತ್ತು.
ಈ ಸಂಬಂಧ ನಿನ್ನೆ ಪೊಲೀಸರು ಸೂರಜ್ ರೇವಣ್ಣನನ್ನು ಪರಪ್ಪನ ಅಗ್ರಹಾರದಿಂದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್ 8 ದಿನ ಸಿಐಡಿ ಪೊಲೀಸ್ ಕಸ್ಟಡಿಗೆ (ಜುಲೈ 1 ರವರೆಗೆ) ನೀಡಿ ಆದೇಶಿಸಿದೆ.
ಇದರ ಬೆನ್ನಲ್ಲಿಯೇ ಸಿಐಡಿ ಪೊಲೀಸರು ಸೂರಜ್ ರೇವಣ್ಣನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಲಿಂಗಕಾಮ ಪ್ರಕರಣದಲ್ಲಿ ಸೂರಜ್ ತನಿಖೆ ಶುರು ಮಾಡಿದ್ದಾರೆ. ತಮ್ಮ ಪ್ರಜ್ವಲ್ ರೇವಣ್ಣ ಇದ್ದ ಕೊಠಡಿಯಲ್ಲೇ ಅಣ್ಣ ಸೂರಜ್ಗೆ ಸಿಐಡಿ ಅಧಿಕಾರಿಗಳು ಡ್ರಿಲ್ ನಡೆಸುತ್ತಿದ್ದಾರೆ.. ಇನ್ನು ಸೂರಜ್ ರೇವಣ್ಣ ಪ್ರಕರಣಕ್ಕೆ SPPಯಾಗಿ ಅಶೋಕ್ ನಾಯ್ಕ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಅಂತೆಯೇ ತನಿಖಾಧಿಕಾರಿಯಾಗಿ ಎಸ್ಪಿ ವೆಂಕಟೇಶ್, DySP ಉಮೇಶ್, ಇನ್ಸ್ಪೆಕ್ಟರ್ ನರೇಂದ್ರಬಾಬು ಅವರನ್ನು ನೇಮಿಸಿದೆ.
ಇಂದು ಅಥವಾ ನಾಳೆ ಸೂರಜ್ ರೇವಣ್ಣನನ್ನು ಹಾಸನಕ್ಕೆ ಕರೆದೊಯ್ದು ಮಹಜರ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ದೂರುದಾರನ ಹೇಳಿಕೆ ಪಡೆದಿದ್ದಾರೆ. ಸ್ಥಳ ಮಹಜರ್ ವೇಳೆ ಕೃತ್ಯಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಇನ್ನು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ಗೂ ಸಿಐಡಿ ನೋಟಿಸ್ ನೀಡಲಿದೆ.
ಇದನ್ನೂ ಓದಿ : ಪೊಲೀಸರು ಲಾಠಿ ರುಚಿ ತೋರಿಸ್ತಿದ್ದಂತೆ ಉಮಾಪತಿಗೌಡ, ಪ್ರಥಮ್ಗೆ ಕೈ ಮುಗಿದು ಕ್ಷಮೆ ಕೇಳಿದ ದರ್ಶನ್ ರೌಡಿ ಫ್ಯಾನ್..!