Download Our App

Follow us

Home » ರಾಜ್ಯ » ಕೇಂದ್ರ ಮಂತ್ರಿ ಸೋಮಣ್ಣ ಪುತ್ರ ಡಾ. ಅರುಣ್ ವಿರುದ್ಧದ ಸುಳ್ಳು FIRಗೆ ಹೈಕೋರ್ಟ್ ತಡೆ..!

ಕೇಂದ್ರ ಮಂತ್ರಿ ಸೋಮಣ್ಣ ಪುತ್ರ ಡಾ. ಅರುಣ್ ವಿರುದ್ಧದ ಸುಳ್ಳು FIRಗೆ ಹೈಕೋರ್ಟ್ ತಡೆ..!

ಬೆಂಗಳೂರು : ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ ಪುತ್ರ ಡಾ. ಅರುಣ್ ಅವರ ವಿರುದ್ಧ ದಾಖಲಾಗಿದ್ದ ಸುಳ್ಳು FIRಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ವಾಣಿಜ್ಯ ವ್ಯವಹಾರಿಕ ಪ್ರಕರಣದಲ್ಲಿ ಅಪರಾಧಿಕರಣ ಮಾಡಲು ಈ ಪ್ರಕರಣವನ್ನು ಬಳಸಿಕೊಳ್ಳಲು ಮುಂದಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, FIRಗೆ ಮತ್ತು ಮುಂದಿನ ತನಿಖೆಗೆ ತಡೆ ನೀಡಿ ಆದೇಶಿಸಿದೆ.

ಡಾ. ಅರುಣ್ ಸೋಮಣ್ಣ ಅವರ ಪರವಾಗಿ ಹಿರಿಯ ನ್ಯಾಯವಾದಿ ರವಿಶಂಕರ್ ವಾದ ಮಂಡಿಸಿ, ಸುಳ್ಳು ಪ್ರಕರಣ ದಾಖಲಿಸಲಾಗಿದೆ ಮತ್ತು ವ್ಯವಹಾರಿಕ ವಿಚಾರಗಳನ್ನು ಈ ರೀತಿ ಅಪರಾಧಿಕರಣ ಮಾಡಲು ಪೊಲೀಸ್ ಠಾಣೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಸಿ ಇದೊಂದು ಸುಳ್ಳು ದೂರು ಎಂದು ವಾದಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿ ನಾಗ ಪ್ರಸನ್ನ ಪ್ರಕರಣಕ್ಕೆ ತಡೆ ನೀಡಿರುವುದಿಲ್ಲವೇ ಮುಂದಿನ ತನಿಖೆಗೂ ತಡೆ ನೀಡಿದ್ದು, ಇದು ಮೇಲ್ನೋಟಕ್ಕೆ ದುರ್ಬಳಕೆಯೆಂದು ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿ. ಸೋಮಣ್ಣ ಕೇಂದ್ರ ಸಚಿವರಾದ ಕೂಡಲೇ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಡಾ. ಅರುಣ್ ಮೇಲೆ ಸಂಜೆಯ ನಗರ ನಿವಾಸಿ ತೃಪ್ತಿ ಹೆಗಡೆ ಈ ಸುಳ್ಳು ದೂರು ದಾಖಲಿಸಿದ್ದರು. ಈ ಬಗ್ಗೆ ಹಲವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದು, ಇದೀಗ ಹೈಕೋರ್ಟ್ ತಡೆಯಿಂದಾಗಿ ಪ್ರಕರಣ ಸ್ಥಗಿತಗೊಂಡಿದೆ.

ಇದನ್ನೂ ಓದಿ : ಸೂರಜ್ ರೇವಣ್ಣ​​ ಪ್ರಕರಣವನ್ನು CID ತನಿಖೆಗೆ ಕೊಡ್ತೀವಿ : ಡಾ. ಜಿ.ಪರಮೇಶ್ವರ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here