ಬೆಂಗಳೂರು : ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧವಾಗಿ ಪೊಲೀಸರು ಕೋರ್ಟ್ಗೆ 3ನೇ ಬಾರಿ ರಿಮ್ಯಾಂಡ್ ಅರ್ಜಿ ಹಾಕಿದ್ದಾರೆ. ಕೊಲೆ ನಂತರ ದರ್ಶನ್ ಗ್ಯಾಂಗ್ ವೆಬ್ ಆ್ಯಪ್ ಬಳಸಿದೆ, ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸುಳಿವು ಸಿಗದಂತೆ ಗ್ಯಾಂಗ್ ಆ್ಯಪ್ ಬಳಕೆ ಮಾಡಿದೆ. ಆ್ಯಪ್ಗಳನ್ನು ಬಳಕೆ ಮಾಡಿ ನಂತರ ಆ್ಯಪ್ ಡಿಲೀಟ್ ಮಾಡಿದ್ದಾರೆ. ಅಷ್ಟೆ ಅಲ್ಲದೆ ಬೇರೆ-ಬೇರೆ ಸಿಮ್ ಕಾರ್ಡ್ಗಳನ್ನು ಬಳಸಿದ್ದಾರೆ. ಆರೋಪಿಗಳ ಮೊಬೈಲ್ಗಳನ್ನು ರಿಟ್ರೀವ್ ಮಾಡಲು ಪೊಲೀಸರು ಅನುಮತಿ ಕೋರಿದ್ದಾರೆ.
3ನೇ ರಿಮ್ಯಾಂಡ್ ಅರ್ಜಿಯಲ್ಲೂ ದರ್ಶನ್ ಫ್ಯಾನ್ಸ್ನ ಪುಂಡಾಟದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ತನಿಖೆಗೆ ದರ್ಶನ್ ಫ್ಯಾನ್ಸ್ ಅಡ್ಡಿಪಡಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದು, ಅಭಿಮಾನಿ ಬಳಗವನ್ನು ಬಳಸಿಕೊಂಡು ತನಿಖೆಗೆ ನಿರಂತರ ಅಡ್ಡಿಪಡಿಸುತ್ತಿದ್ದಾರೆ. ದರ್ಶನ್ ಅಭಿಮಾನಿ ಬಳಗವನ್ನು ಉಲ್ಲೇಖಿಸಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದು, A-1 ಪವಿತ್ರಾಗೌಡ ಮತ್ತು A-2 ದರ್ಶನ್ ಅಭಿಮಾನಿ ಬಳಗವನ್ನು ಬಳಸಿಕೊಳ್ತಿದ್ದಾರೆ. ಅಭಿಮಾನಿ ಬಳಗ ಬಳಸಿಕೊಂಡು ತನಿಖೆಗೆ ನಿರಂತರ ಅಡ್ಡಿ ಮಾಡುತ್ತಿದ್ದಾರೆ ಎಂದು ರಿಮ್ಯಾಂಡ್ ಅರ್ಜಿ ಮೂಲಕ ಪೊಲೀಸರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಈ ರಿಮ್ಯಾಂಡ್ ಅರ್ಜಿಯಲ್ಲಿ ಪವಿತ್ರಾಗೌಡ ಕಿಂಗ್ಪಿನ್ ಆಗಿದ್ದು, ಈಕೆಯ ಪ್ರಚೋದನೆಯಿಂದಲೇ ರೇಣುಕಾ ಕೊಲೆಯಾಗಿದೆ. ಇತರೆ ಆರೋಪಿಗಳೊಂದಿಗೆ ಸೇರಿ ಒಳಸಂಚು ಮಾಡಿ ಕೊಲೆ ಮಾಡಲಾಗಿದೆ, A-2 ದರ್ಶನ್ ತನ್ನ ಹಣ ಹಾಗೂ ಅಭಿಮಾನಿ ಬಳಗವನ್ನು ಬಳಸಿಕೊಂಡಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿ ಕಾನೂನು ದುರುಪಯೋಗ ಪಡಿಸಿಕೊಂಡಿದ್ದಾರೆ, ಈ ನೆಲದ ಕಾನೂನನ್ನು ದುರ್ಬಳಕೆ ಮಾಡಿಕೊಂಡಿರೋದು ಸಾಕ್ಷಾಧಾರದಲ್ಲಿ ಪತ್ತೆಯಾಗಿದೆ.
A-2 ದರ್ಶನ್ ತನ್ನ ಹಣಬಲ, ಪ್ರಭಾವಿ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯವೆಸಗಿದ್ದು, ಕಿಡ್ನಾಪ್, ಕೊಲೆ, ಸಾಕ್ಷಿ ನಾಶಕ್ಕೂ ಅಭಿಮಾನಿಗಳನ್ನು ಬಳಸಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ದರ್ಶನ್ ರೌಡಿ ಫ್ಯಾನ್ಸ್ಗಳ ಬಂಡವಾಳ ಬಯಲಾಗಿದ್ದು, ಬಡತನದಲ್ಲಿರುವ ವ್ಯಕ್ತಿಗಳಿಗೆ ಹಣದ ಆಮಿಷ ತೋರಿಸಿ ಶವ ಸಾಗಿಸಿದ್ದಾರೆ. ದರ್ಶನ್ ಬಳಿಯಿದ್ದ ಹಣದ ದುರಹಂಕಾರದಿಂದಲೇ ಕೊಲೆಯಾಗಿದೆ, ರಿಮ್ಯಾಂಡ್ ಅರ್ಜಿಯಲ್ಲಿ ದರ್ಶನ್ ಹಣದ ದರ್ಪದ ಇಂಚಿಂಚೂ ಬಯಲಾಗಿದೆ.
ಇದನ್ನೂ ಓದಿ : ಪೃಥ್ವಿ ಅಂಬಾರ್ ನಟನೆಯ ‘ಚೌಕಿದಾರ್’ ಸಿನಿಮಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ..!