ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ಆರೋಪಿ ದರ್ಶನ್ಗೆ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಿದೆ. ಈ ಹಿನ್ನೆಲೆ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಇಂದು ಮಧ್ನಾಹ್ಯ 3 ಗಂಟೆ ನಂತರ ಪೊಲೀಸರು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ದರ್ಶನ್ನ್ನು ತನಿಖಾ ತಂಡ 13 ದಿನ, 312 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, 13 ವರ್ಷಗಳ ನಂತರ ಡಿ ಬಾಸ್ ಮತ್ತೆ ಜೈಲು ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆ ದರ್ಶನ್ನ್ನು ಕೋರ್ಟ್ಗೆ ಕರೆದೊಯ್ಯೋ ರೂಟ್ನಲ್ಲಿ ಫುಲ್ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಕೋರ್ಟ್ವರೆಗೆ ಸೆಕ್ಯೂರಿಟಿ ವ್ಯವಸ್ಥೆಯಿದ್ದು, ಕೋರ್ಟ್ನಿಂದ ಪರಪ್ಪನ ಅಗ್ರಹಾರ ಜೈಲಿನವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಜೈಲಿನ ಬಳಿಯೂ ದರ್ಶನ್ಗೆ ಪೊಲೀಸ್ ಭದ್ರಕೋಟೆಯಿದ್ದು, ಅಭಿಮಾನಿಗಳು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ KSRP ಪೊಲೀಸ್ ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ನ್ಯಾಯಾಂಗ ಬಂಧನ ವಿಧಿಸಿದ್ರೆ ಜೈಲಿಗೆ ಕರೆದೊಯ್ಯುವಾಗಲೂ ಸೆಕ್ಯೂರಿಟಿಯಿದೆ. ಒಂದ್ವೇಳೆ ಜೈಲಿಗೆ ಹೋದ್ರೆ ದರ್ಶನ್ಗೆ ಪ್ರತ್ಯೇಕ ಬ್ಯಾರಕ್ ವ್ಯವಸ್ಥೆಯಿದೆ. ಜೈಲಿನಲ್ಲೂ ದರ್ಶನ್ ವಿರೋಧಿಗಳಿರೋ ಸಾಧ್ಯತೆಯಿದ್ದು, ಎಲ್ಲಾ ಕಡೆ ಸೂಕ್ತ ಭದ್ರತೆಗೆ ಪೊಲೀಸ್ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ದರ್ಶನ್ಗೆ 70 ಲಕ್ಷ ಕೊಟ್ಟಿದ್ದ ಮಾಜಿ ಡೆಪ್ಯುಟಿ ಮೇಯರ್ಗಾಗಿ ಪೊಲೀಸರ ಹುಡುಕಾಟ..!