ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ನಂತರ ಪೊಲೀಸರು ಬಿಬಿಎಂಪಿ ಮಾಜಿ ಡೆಪ್ಯುಟಿ ಮೇಯರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದರ್ಶನ್ ಕೊಲೆ ಕೇಸ್ ಮುಚ್ಚಿ ಹಾಕಲು ಮಾಜಿ ಡೆಪ್ಯುಟಿ ಮೇಯರ್ ಲಕ್ಷ ಲಕ್ಷ ಹಣ ಕೊಟ್ಟಿದ್ದರು.
ಮೋಹನ್ ರಾಜ್ ಬಿಬಿಎಂಪಿಯ ಮಾಜಿ ಡೆಪ್ಯುಟಿ ಮೇಯರ್ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತರಾಗಿದ್ದಾರೆ. ದರ್ಶನ್ನ್ನು ಕೊಲೆ ಕೇಸ್ ನಿಂದ ಬಚಾವ್ ಮಾಡಲು ಮೋಹನ್ ರಾಜ್ ದರ್ಶನ್ಗೆ 70 ಲಕ್ಷ ಹಣ ಕೊಟ್ಟಿದ್ದರು. ಹುಡುಗರು ಸರಂಡರ್ ಆಗಲು ಮೋಹನ್ ರಾಜ್ 70 ಲಕ್ಷದಲ್ಲಿ 30 ಲಕ್ಷ ಕೊಟ್ಟಿದ್ದು, ಉಳಿದ 40 ಲಕ್ಷ ಕೊಲೆ ಕೇಸ್ ಮುಚ್ಚಿಹಾಕಲು ದರ್ಶನ್ ಇಟ್ಟುಕೊಂಡಿದ್ದ. ಮೋಹನ್ ರಾಜ್ ಕೊಟ್ಟ 70 ಲಕ್ಷ ಹಣವನ್ನು ತನಿಖಾ ತಂಡ ಸೀಜ್ ಮಾಡಿದೆ.
ದರ್ಶನ್ ಅರೆಸ್ಟ್ ಆಗ್ತಾ ಇದ್ದಂತೆ ಮೋಹನ್ ರಾಜ್ ಊರು ಬಿಟ್ಟಿದ್ದು, ಬೊಮ್ಮನಹಳ್ಳಿಯ ಮೋಹನ್ ರಾಜ್ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಮೋಹನ್ ರಾಜ್ ಬಂಧನಕ್ಕೆ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿದ್ದು, ಯಾವುದೇ ಕ್ಷಣ ಪೊಲೀಸರು ಶಾಸಕ ಸತೀಶ್ ರೆಡ್ಡಿ ಆಪ್ತ ಮೋಹನ್ ರಾಜ್ನ್ನು ಬಂದಿಸಲಿದ್ದಾರೆ.
ಇದನ್ನೂ ಓದಿ : ರೇಣುಕಾ ಮರ್ಡರ್ ಕೇಸ್ನಲ್ಲಿ ದರ್ಶನ್ ಅರೆಸ್ಟ್ - ಪೊಲೀಸರಿಗೆ, ಮೀಡಿಯಾಗಳಿಗೆ ಹ್ಯಾಟ್ಸಾಪ್ ಎಂದ ನಟಿ ರಮ್ಯಾ..!