ಬೆಂಗಳೂರು : ಚನ್ನಪಟ್ಟಣ ಮುಹೂರ್ತ ಘೋಷಣೆಗೂ ಮುನ್ನವೇ ಡಿಸಿಎಂ ಡಿಕೆಶಿ-MLC ಯೋಗೇಶ್ವರ್ ನಡುವೆ ಬಿಗ್ ಫೈಟ್ ನಡೆದಿದೆ. ಚನ್ನಪಟ್ಟಣಕ್ಕೆ ಡಿಕೆಶಿ ಬಂದ್ರೆ ರಾಜಕೀಯ ಅಂತ್ಯವಾಗುತ್ತೆ ಎಂದು ಯೋಗೇಶ್ವರ್ ಟಾಂಗ್ ಕೊಟ್ಟಿದ್ದರು.
ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಮಾತನಾಡಿ, ನನ್ನ ಹಿಂದೆ ದೊಡ್ಡ ಶಕ್ತಿ ಇದೆ, ಆ ಶಕ್ತಿಯೇ ನನಗೆ ರಕ್ಷಣೆ. ನನ್ನ ರಾಜಕೀಯ ಅಂತ್ಯದ ತೀರ್ಮಾನವನ್ನು ಜನರು ಮಾಡ್ತಾರೆ, ದೊಡ್ಡೋರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ನನಗೆ ಟೈಂ ಇಲ್ಲ, ಶಕ್ತಿ ಕೊಡಿ ಎಂದು ಚನ್ನಪಟ್ಟಣ ಜನರನ್ನು ಕೇಳಿದ್ದೇನೆ ಎಂದಿದ್ದಾರೆ.
ನನ್ನ ಅಂತ್ಯ ಬರೆಯೋರು ಜನರು, ವಿಶ್ವಾಸ ಇದ್ರೆ ಮತ ಹಾಕ್ತಾರೆ. ಎಲ್ಲವೂ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ, ನಾನು, ಸಿದ್ದರಾಮಯ್ಯ ಜೊತೆಗೂಡಿ ಎಲೆಕ್ಷನ್ ಮಾಡ್ತೀವಿ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಡಾಲಿ ಧನಂಜಯ್ : ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್..!
Post Views: 96