ಶಿವಮೊಗ್ಗ : ಶಿವಮೊಗ್ಗದಲ್ಲಿ ಪ್ರತಿಭಟನೆ ವೇಳೆ ಕುಸಿದುಬಿದ್ದು ಮಾಜಿ MLC ಭಾನುಪ್ರಕಾಶ್ ಸಾವನ್ನಪ್ಪಿದ್ದಾರೆ. 69 ವರ್ಷದ ಭಾನುಪ್ರಕಾಶ್ ಅವರು ವಿಧಾನ ಪರಿಷತ್ ಮಾಜಿ ಸದಸ್ಯರಾಗಿದ್ದರು. ಬೆಳಗ್ಗೆ 11.15ರ ಸುಮಾರಿಗೆ ಗೋಪಿ ವೃತ್ತದ ಬಳಿ ಭಾನುಪ್ರಕಾಶ್ ಪ್ರತಿಭಟನೆ ಮಾಡ್ತಿದ್ದರು.
ಪ್ರತಿಭಟನೆಯಲ್ಲಿ ಭಾನುಪ್ರಕಾಶ್ ಅವರು ಭಾಷಣವನ್ನೂ ಮಾಡಿದ್ದರು, ಆದರೆ ಭಾರೀ ಹೃದಯಾಘಾತದಿಂದ ಭಾನುಪ್ರಕಾಶ್ ಜೀವ ಬಿಟ್ಟಿದ್ದಾರೆ. ಭಾನುಪ್ರಕಾಶ್ ಸರ್ಕಾರದ ವಿರುದ್ಧ ಮೌನಾಚರಣೆ ಮಾಡಿಸಿದ್ದರು. ನಂತರ ಸುಸ್ತಾಗುತ್ತಿದೆ ಎಂದು ವಾಹನಕ್ಕೆ ಹೋಗಿ ಕುಳಿತಿದ್ದರು. ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಭಾನುಪ್ರಕಾಶ್ ಅವರು ಬಿಜೆಪಿ ಉಪಾಧ್ಯಕ್ಷ, ಪ್ರಕೋಷ್ಠಗಳ ಸಂಚಾಲಕರಾಗಿದ್ದರು. ಮೃತದೇಹವನ್ನು ಮತ್ತೂರಿಗೆ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ : ಕುತೂಹಲ ಮೂಡಿಸಿದ ‘ನಸಾಬ್’ ಚಿತ್ರದ ಟ್ರೇಲರ್ : ಅಪ್ಪನ ಕಥೆಗೆ ಮಗನೇ ನಾಯಕ ಹಾಗೂ ನಿರ್ದೇಶಕ..!
Post Views: 264