ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಬೆನ್ನಲ್ಲೇ ದರ್ಶನ್ ಮೇಲೆ ನಟ ಉಪೇಂದ್ರ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಬೇಸರ ಹೊರಹಾಕಿದ್ದಾರೆ.
ಠಾಣೆ ಸುತ್ತ ಸೈಡ್ವಾಲ್ ಹಾಕಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಪರೋಕ್ಷ ಬೇಸರ ವ್ಯಕ್ತಪಡಿಸಿದ ನಟ ಉಪೇಂದ್ರ ಅವರು, ಈ ಪ್ರಕರಣದಲ್ಲಿ ಪಾರದರ್ಶಕವಾದ ತನಿಖೆ ಆಗ್ಬೇಕು. ಠಾಣೆಗೆ ಪೆಂಡಾಲ್ ಹಾಕುವಂತ ಅಗತ್ಯ ಇರಲಿಲ್ಲ. ಹೈಪ್ರೊಫೈಲ್ ಕೇಸ್ ಇದು..ನಿಷ್ಪಕ್ಷಪಾತ ತನಿಖೆ ಆಗ್ಬೇಕು. ಪೊಲೀಸರು ಉತ್ತಮವಾಗಿ ತನಿಖೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು ಏನೇನೋ ಆತಂಕ, ಅನುಮಾನ, ಊಹಾಪೋಹ ಹುಟ್ಟಿಕೊಳ್ತಿದೆ. ಯಾವುದೇ ಕೇಸ್ ಆದ್ರೂ ಕುಟುಂಬಕ್ಕೆ ತನಿಖೆ ಬಗ್ಗೆ ಗೊತ್ತಾಗಬೇಕು. ಸಾರ್ವಜನಿಕ ವ್ಯಕ್ತಿ ಆಗಿರೋದ್ರಿಂದ ಎಲ್ಲವನ್ನೂ ಸಾರ್ವಜನಿಕ ಮಾಡ್ಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇದಕ್ಕೆ ತೆರೆ ಎಳೆಯಬೇಕು. ಗೊಂದಲಗಳಿಲ್ಲದೆೇ ಇದ್ರೆ ಪೊಲೀಸ್ ಬಗ್ಗೆ ಅನುಮಾನ ಕಡಿಮೆ ಆಗುತ್ತೆ ಎಂದು ಉಪೇಂದ್ರ ಅವರು ತಿಳಿಸಿದ್ದಾರೆ.
ಇದನ್ನೂಓದಿ: ದರ್ಶನ್-ಪವಿತ್ರಾಗೌಡ ಹೇಳಿದ್ದಕ್ಕೆ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟೆ : A-9 ಆರೋಪಿ ಬಾಯ್ಬಿಟ್ಟ ಸ್ಫೋಟಕ ಸತ್ಯ..!