ಬೆಂಗಳೂರು : ರೇಣುಕಾಸ್ವಾಮಿ ಮರ್ಡರ್ ಕೇಸ್ ಆರೋಪಿ ದರ್ಶನ್ನ ಮತ್ತೊಂದು ಕರಾಳ ಮುಖ ಇದೀಗ ಬೆಳಕಿಗೆ ಬಂದಿದೆ. ದರ್ಶನ್ ಅಭಿಮಾನಿಗಳ ರೌಡಿಸಂ ಯಾವ ಸಿನಿಮಾಗೂ ಕಡಿಮೆ ಇಲ್ಲ. ನಟ ದರ್ಶನ್ ಬರೀ ರೌಡಿಸಂ ಮಾಡೋ ಚೇಲಗಳನ್ನೇ ಇಟ್ಟುಕೊಂಡಿದ್ದಾನೆ.
ರೌಡಿಸಂಗಾಗಿಯೇ ಆರೋಪಿ ದರ್ಶನ್ ಕಿರಾತಕರ ಟೀಂ ಇಟ್ಕೊಂಡಿದ್ದು, ದರ್ಶನ್ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಕಿರಾತಕರ ಟೀಂನಿಂದ ಒದೆ ಬೀಳುತ್ತೆ. ಈ ಹಿಂದೆಯೂ ಡಿ ಗ್ಯಾಂಗ್ ಅನೇಕರನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದೆ. ರೌಡಿ ಗ್ಯಾಂಗ್ಗೆ ದರ್ಶನ್ ಅನ್ನ, ನೀರು, ಹಣ ಕೊಟ್ಟು ಸಲಹುತ್ತಿದ್ದು, ದರ್ಶನ್ ಬಗ್ಗೆ ಸ್ವಲ್ಪ ಮಾತ್ನಾಡಿದ್ರೂ ಕಿರಾತಕರು ಟಾರ್ಗೆಟ್ ಮಾಡ್ತಿದ್ದರು. ದರ್ಶನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ರೆ, ಮಾಧ್ಯಮದ ಮುಂದೆ ಮಾತನಾಡಿದ್ರೆ ಅಂತವರ ಕಥೆ ಮುಗೀತು.
KD ಟೀಂ ಮೆಸೇಜ್ ಮಾಡಿ, ಫೋನ್ ಮಾಡಿ ಕರೆಸಿ ಟಾರ್ಚರ್ ಕೊಡುತ್ತೆ. ಕಿಡ್ನಾಪ್ ಮಾಡಿ ನಿಗೂಢ ಸ್ಥಳಕ್ಕೆ ಕರೆದೊಯ್ದು ಚಿತ್ರಹಿಂಸೆ ಕೊಡ್ತಾರೆ, ವಿಜಯ್ ತೂಗುದೀಪ ಅನ್ನೋ ಆಸಾಮಿ ರೌಡಿಸಂ ಮಾಡ್ತಿದ್ದು, ನಮ್ ಬಾಸೇ ಕಿಂಗ್..ಕಿಲಾಡಿ ಅಂತ ಕಿರಾತಕ ಮೆರೆಯುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಆಸಾಮಿ ವಿಜಯ್ ತೂಗುದೀಪ ಪೇಜ್ ಸೃಷ್ಟಿಸಿದ್ದು, ವಿಜಯ್ ಹಾಗು ರೌಡಿ ಗ್ಯಾಂಗ್ ಮನ ಬಂದಂತೆ ಬಡಿದು ಕ್ಷಮೆ ಕೇಳಿಸುತ್ತಿತ್ತು. dteam 7999, vijay thoogudeepa ಅನ್ನೋ ಇನ್ಸ್ಟಾದಲ್ಲಿ ವೀಡಿಯೋ ಬಿಟ್ಟು ಬಿಲ್ಡಪ್ ತೆಗೆತಿದ್ದ, ಈಗ ದರ್ಶನ್ ರೌಡಿ ಗ್ಯಾಂಗ್ನ ಹುಚ್ಚಾಟ ಎಲ್ಲೆಡೆ ವೈರಲ್ ಆಗ್ತಿವೆ.
ಇದನ್ನೂ ಓದಿ : ಪೋಕ್ಸೋ ಪ್ರಕರಣ : CID ವಿಚಾರಣೆಗೆ ಹಾಜರಾದ ಮಾಜಿ ಸಿಎಂ BSY..!