ಚಿತ್ರದುರ್ಗ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಮ್ಮ ಪುತ್ರ ಪೊಲೀಸರಿಗೆ ಶರಣಾಗಿರುವ ಸುದ್ದಿ ತಿಳಿದು ಆರೋಪಿ ಅನುಕುಮಾರ್ ತಂದೆ ಚಂದ್ರಣ್ಣ ಜೂ.14ರಂದು ರಸ್ತೆಯಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಪ್ಪನ ಅಂತ್ಯಸಂಸ್ಕಾರಕ್ಕೆ ಅನುಕುಮಾರ್ನನ್ನು ನಿನ್ನೆ ಪೊಲೀಸ್ ಭದ್ರತೆಯಲ್ಲಿ ಚಿತ್ರದುರ್ಗಕ್ಕೆ ಕರೆದೊಯ್ಯಲಾಗಿತ್ತು. ಅಪ್ಪನ ಶವ ನೋಡಿ ಆರೋಪಿ ಅನು ಬಿಕ್ಕಿ ಬಿಕ್ಕಿ ಕಣ್ಣಿರು ಹಾಕಿದ್ದ.
ರೇಣುಕಾಸ್ವಾಮಿ ಮರ್ಡರ್ ಆರೋಪಿ ಅನು ಕೊನೆಯ ಬಾರಿ ಅಪ್ಪನ ಮುಖ ನೋಡಿದ್ದಾನೆ. ಅಮ್ಮನ ಕಣ್ಣೀರು ಕಂಡು ಆರೋಪಿ ಅಳುತ್ತಲೇ ತಾಯಿಯ ಕಣ್ಣಿರು ಒರೆಸಿದ್ದು, ಅನು ಸಂಬಂಧಿಕರ ಜೊತೆ ದುಃಖ, ನೋವಿನಲ್ಲೇ ಅಪ್ಪನ ಶವದ ಪಕ್ಕ ಕುಳಿತಿದ್ದ. ಚಿತ್ರದುರ್ಗದ ಕನಕ ಸರ್ಕಲ್ ಬಳಿಯ ಸ್ಮಶಾನದಲ್ಲಿ ಆರೋಪಿ ಅನು ತಂದೆ ಚಂದ್ರಪ್ಪ ಅವರ ಅಂತ್ಯಕ್ರಿಯೆ ನಡೆದಿದೆ. ಅಪ್ಪನ ಮೃತ ದೇಹ ಕಂಡು ಆರೋಪಿ ಅನುಕುಮಾರ್ ಗೋಳಾಡಿದ್ದಾನೆ.
ಪತಿ ಮೃತದೇಹ, ಅರೆಸ್ಟ್ ಆಗಿರೋ ಮಗನ ಕಂಡು ತಾಯಿ ಜಯಮ್ಮನೂ ಗೋಳಾಡಿದ್ದು, ಈ ವೇಳೆ ಆರೋಪಿ ಅನು ಕುಮಾರ್ ಅಳುತ್ತಲೇ ತಾಯಿಯ ಕಣ್ಣೀರು ಒರೆಸಿದ್ದಾನೆ. ಶವದ ಪಕ್ಕ ಕುಳಿತು ನನ್ನಿಂದಲೇ ನಿನಗೆ ಹೀಗಾಯ್ತು ಎಂದು ಅನು ಕಣ್ಣೀರು ಹಾಕಿದ್ದಾನೆ. ಕೋರ್ಟ್ ಅನುಮತಿಯಂತೆ ತಂದೆ ಅಂತ್ಯಕ್ರಿಯೆಯಲ್ಲಿ ಅನು ಭಾಗಿಯಾಗಿದ್ದು, ಚಂದ್ರಪ್ಪ ಅಂತ್ಯಕ್ರಿಯೆ ನಂತರ ಪೊಲೀಸರು ಮಹಜರ್ಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ಕೋರ್ಟ್ ಮುಂದೆ ಡಿ ಗ್ಯಾಂಗ್ನ ಕರಾಳ ಮುಖ ಬಿಚ್ಚಿಟ್ಟ ಪೊಲೀಸರು : ರೇಣುಕಾಸ್ವಾಮಿಗೆ ಹೇಗೆಲ್ಲಾ ಟಾರ್ಚರ್ ಕೊಟ್ಟಿದ್ದಾರೆ ಗೊತ್ತಾ..?