Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಕೊ*ಲೆ ಕೇಸ್​ : ದರ್ಶನ್ ಗ್ಯಾಂಗ್​​ನ್ನು ಇಂದು ಮೈಸೂರಿಗೆ ಕರೆದೊಯ್ಯಲು ಸಿದ್ದತೆ..!

ರೇಣುಕಾಸ್ವಾಮಿ ಕೊ*ಲೆ ಕೇಸ್​ : ದರ್ಶನ್ ಗ್ಯಾಂಗ್​​ನ್ನು ಇಂದು ಮೈಸೂರಿಗೆ ಕರೆದೊಯ್ಯಲು ಸಿದ್ದತೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನದಲ್ಲಿರುವ ನಟ ದರ್ಶನ್ &​ ಗ್ಯಾಂಗ್‌ ಅನ್ನು ನಿನ್ನೆ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ದರ್ಶನ್ &​ ಗ್ಯಾಂಗ್‌ ಅನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 24ನೇ ACMM ಆದೇಶ ಹೊರಡಿಸಿತ್ತು. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಇಂದು ಡಿ ಗ್ಯಾಂಗ್​​ನ್ನು ಮಹಜರ್​​ಗಾಗಿ ಮೈಸೂರಿಗೆ​ ಕರೆದೊಯ್ದುಲಾಗುತ್ತದೆ.

ಡಿ ಗ್ಯಾಂಗ್​​ನ್ನು ಟೈಟ್​​​ ಸೆಕ್ಯೂರಿಟಿಯಲ್ಲಿ ಕರೆದೊಯ್ಯಲು ಸಿದ್ಧತೆ ನಡೆದಿದೆ. ದರ್ಶನ್​ ಫಾರ್ಮ್​ ಹೌಸ್​​​, ಮೈಸೂರಿನ ಮನೆಯಲ್ಲಿ ಪೊಲೀಸರು ಮಹಜರ್​​​ ಮಾಡಲಿದ್ದಾರೆ. ಮಹಜರ್ ಮಾಡಿ ಪೊಲೀಸರು ಕೆಲವು ಮಾಹಿತಿ ಕಲೆ ಹಾಕಲಿದ್ದಾರೆ. ಪೊಲೀಸರು ರೇಣುಕಾಸ್ವಾಮಿ ಕೊಲೆ ಸಂಬಂಧ ಮಹತ್ವದ ಸಾಕ್ಷಿ ಸಂಗ್ರಹಿಸ್ತಿದ್ದು, ACP ಚಂದನ್​​ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ರೇಣುಕಾಸ್ವಾಮಿ ಕೊಲೆ ಸಂಬಂಧವಾಗಿ ಫಾರ್ಮ್​​​ಹೌಸ್, ತೋಟದ ಮನೆಯಲ್ಲಿ ಮೀಟಿಂಗ್​​ ಮಾಡಿದ್ದ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಇಂದು ಅಥವಾ ನಾಳೆ ಮೈಸೂರಿಗೆ ಡಿ ಗ್ಯಾಂಗ್​​ನ್ನು​​ ಕರೆದೊಯ್ಯಲು ತಯಾರಿ ನಡೆಯುತ್ತಿದೆ.

ಇದನ್ನೂ ಓದಿ : ಗಾನ ಗಂಧರ್ವ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ಥಳಿ ಅನಾವರಣ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here