ಮೈಸೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಪವಿತ್ರಾ ಗ್ಯಾಂಗ್ ಬಂಧನಕ್ಕೆ ಒಳಗಾಗಿದೆ. ಡೆಡ್ಲಿ ಮರ್ಡರ್ ಕೇಸ್ನ ತನಿಖೆಯಲ್ಲಿ ಸಾಕಷ್ಟು ಭಯಾನಕ ಸತ್ಯಗಳು ಒಂದೊಂದಾಗಿ ಆಚೆ ಬರುತ್ತಿದೆ. ಇದೀಗ ಈ ಪ್ರಕರಣದಲ್ಲಿ ಭಾಗಿಯಾದ ದರ್ಶನ್ ಬಗ್ಗೆ ಮೊದಲ ಗುರು ಎನಿಸಿಕೊಂಡಿರೋ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿದ್ದಾರೆ.
ನಟ ದರ್ಶನ್ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅಡ್ಡಂಡ ಕಾರ್ಯಪ್ಪ ಅವರು, ‘ದರ್ಶನ್ಗೆ ಶಿಕ್ಷಣದ ಕೊರತೆ ಇದೆ. ಅವನ ಫ್ರೆಂಡ್ಸ್ ಸರಿ ಇಲ್ಲ. ಅವರ ಫ್ರೆಂಡ್ಸ್ ಲೋಫರ್ಗಳು. ಸುದೀಪ್ಗೆ ಈ ರೀತಿಯ ಫ್ರೆಂಡ್ ಸರ್ಕಲ್ ಮಾಡಿಕೊಳ್ಳೋಕಾಗಲ್ಲ. ಏಕೆಂದರೆ ಅವನ ಓದಿದವನು ಎಂದು ತಿಳಿಸಿದ್ದಾರೆ.
ಗೆಳೆಯರನ್ನು ನೋಡಿ ಅಳೆಯಬಹುದು. ಹೆಂಡ ಕೂಡ ಅವನು ಹಾಳಾಗೋಕೆ ಕಾರಣ. ರಾಜ್ಕುಮಾರ್ ಅವರಿಂದ ದರ್ಶನ್ ಕಲಿಯಲೇ ಇಲ್ಲ. ತನ್ನ ಒಳ್ಳೆಯ ಗುಣಗಳನ್ನು ದರ್ಶನ್ ಉಪಯೋಗಿಸಿಕೊಳ್ಳಲೇ ಇಲ್ಲ. ಹೆಂಡ, ಹೆಣ್ಣಿನಿಂದ ಹಾಳಾದ. ತಪ್ಪು ಮಾಡಿದ್ದಾನೆ. ಪವಿತ್ರಾ ಶನಿ ರೂಪದಲ್ಲಿ ಬಂದಿದ್ದಾಳೆ. ರೇಣುಕಾಸ್ವಾಮಿಯ ಪತ್ನಿ ಒಂಟಿಯಾಗಿದ್ದಾಳೆ. ಅಭಿಮಾನಿಗಳು ಅವರ ಸಹಾಯಕ್ಕೆ ನಿಲ್ಲಿ’ ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ : ‘ರಾಬಿನ್ಹುಡ್’ಗೆ ಶ್ರೀಲೀಲಾ ಲೇಡಿಬಾಸ್ – ಮತ್ತೆ ಒಂದಾಯ್ತು ‘ಎಕ್ಸ್-ಅರ್ಡಿನರಿ ಮ್ಯಾನ್’ ಜೋಡಿ..!