ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನದಲ್ಲಿರುವ ನಟ ದರ್ಶನ್ & ಗ್ಯಾಂಗ್ ಅನ್ನು ಪೊಲೀಸರು ಕೋರ್ಟ್ಗೆ ಹಾಜರುಸಿದ್ದರು. ಇದೀಗ ದರ್ಶನ್ & ಗ್ಯಾಂಗ್ ಅನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 24ನೇ ACMM ಆದೇಶ ಹೊರಡಿಸಿದೆ.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಹೀಗಾಗಿ ತಡಮಾಡದೇ ಇಂದೇ ದರ್ಶನ್ & ಗ್ಯಾಂಗ್ ಅನ್ನು 24ನೇ ACMM ಕೋರ್ಟ್ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕೇಳಿದ್ದರು.
ಇದೀಗ ಪೊಲೀಸರ ಮನವಿ ಪುರಸ್ಕರಿಸಿದ ACMM ಕೋರ್ಟ್ A1 ಪವಿತ್ರ ಗೌಡ, A2 ದರ್ಶನ್, A3 ಪವನ್, A4 – ರಾಘವೇಂದ್ರ, A5 ನಂದೀಶ್, A6 ಜಗದೀಶ್, A 7 ಅನುಕುಮಾರ್ ವಶಕ್ಕೆ, A10 ವಿನಯ್, A12 ಲಕ್ಷ್ಮಣ್, 13 ದೀಪಕ್, A14 ಪ್ರದೋಶ್ , A16 ನಿಖಿಲ್ನನ್ನು ಜೂನ್ 20ರ ವರೆಗೆ ಮತ್ತೆ D ಗ್ಯಾಂಗ್ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಇದನ್ನೂ ಓದಿ : ರಾಜ್ಯದ ವಾಹನ ಸವಾರರಿಗೆ ಬಿಗ್ಶಾಕ್ : ಪೆಟ್ರೋಲ್ – ಡೀಸೆಲ್ ತೆರಿಗೆ ಹೆಚ್ಚಿಸಿದ ರಾಜ್ಯ ಸರಕಾರ, ದರ ಭಾರೀ ಏರಿಕೆ..!