ಬೆಂಗಳೂರು : ಪೋಕ್ಸೋ ಕೇಸ್ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಎಸ್ವೈ ಅವರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ ನೀಡಿದೆ.
ಬಿ.ಎಸ್ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠದಲ್ಲಿ ಬಿಎಸ್ವೈ ಜಾಮೀನು ವಿಚಾರಣೆ ನಡೆಯಿತು. ಈ ವಿಚಾರಣೆಯಲ್ಲಿ ಬಿಎಸ್ವೈ ಅವರನ್ನು ಮುಂದಿನ ವಿಚಾರಣೆ ತನಕ ಅರೆಸ್ಟ್ ಮಾಡುವಂತಿಲ್ಲ. ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಯಡಿಯೂರಪ್ಪ ಓರ್ವ ಮಾಜಿ ಸಿಎಂ, ಜೀವನದ ಸಂದ್ಯಾಕಾಲದಲ್ಲಿ ಇದ್ದಾರೆ. ಅವರ ಕಸ್ಟಡಿಯ ವಿಚಾರಣೆ ಅಗತ್ಯ ಕಾಣ್ತಾ ಇಲ್ಲ. ಆರೋಗ್ಯದ ಸಮಸ್ಸೆಗಳು ಇರುತ್ತವೆ. ಆರೋಪಿ ಓಡಿ ಹೋಗುವ ಅಂಶಗಳು ಕಂಡು ಬರ್ತಿಲ್ಲ. ಎರಡು ವಾರದ ನಂತರ ಅರ್ಜಿ ವಿಚಾರಣೆ ನಡೆಯಲಿದೆ. ಅಲ್ಲಿಯ ತನಕ ಯಾವುದೇ ಅರೆಸ್ಟ್ ಮಾಡುವಂತಿಲ್ಲ ಎಂದು ನ್ಯಾಯಾಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಆದೇಶ ನೀಡಿದ್ದಾರೆ.
ಇದನ್ನೂ ಓದಿ : ‘ಗೌರಿ’ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ ಸಾಂಗ್ ಅದ್ಧೂರಿ ರಿಲೀಸ್..!