ಬೆಂಗಳೂರು : ದರ್ಶನ್ ಕೇಸ್ನಲ್ಲಿ ಹಳ್ಳ ಹಿಡಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಇದೀಗ ವಕೀಲರ ನಿಯೋಗ ಅನ್ನಪೂರ್ಣೇಶ್ವರಿ ನಗರ ಠಾಣೆಯ CCTV ದೃಶ್ಯ ಕೇಳಿದೆ. ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರ ನಿಯೋಗ ಠಾಣೆಗೆ ಭೇಟಿ ನೀಡಿದ್ದು, ಈ ವೇಳೆ ನಿಯೋಗ RTI ಮೂಲಕ ಪೊಲೀಸ್ ಠಾಣೆಯ CCTV ಕ್ಯಾಮೆರಾಗಳ ದೃಶ್ಯವನ್ನ ನೀಡುವಂತೆ ಕೇಳಿದೆ. ವಕೀಲ ಉಮಾಪತಿ, ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ನೇತೃತ್ವದಲ್ಲಿ ದರ್ಶನ್, ಪವಿತ್ರಾಗೌಡ ಸೇರಿ ಆರೋಪಿಗಳಿರುವ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ದರ್ಶನ್ ಸೇರಿ ಕೆಲ ಆರೋಪಿಗಳಿಗೆ ಸ್ಪೆಷಲ್ ಆತಿಥ್ಯ ನೀಡುತ್ತಿರುವ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆರೋಪ ಬಂದ ಹಿನ್ನೆಲೆಯಲ್ಲಿ ವಕೀಲರ ನಿಯೋಗ ಭೇಟಿ ನೀಡಿದೆ. ವಕೀಲರು ಜೂನ್ 10ರ ನಂತರದ ಪೊಲೀಸ್ ಠಾಣೆಯ CCTV ದೃಶ್ಯ ಕೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಠಾಣೆ ಒಳಗಡೆ ಸಿಸಿಟಿವಿ ಅಳವಿಡಿಸರಬೇಕು, ವಕೀಲರ ನಿಯೋಗ ಒಟ್ಟು ಮೂರು ವಿಚಾರಕ್ಕೆ ಮಾಹಿತಿ ಕೇಳಿದೆ.
ಅಂಶ-1: ಪ್ರಕರಣ ನಡೆದ ದಿನದಿಂದ ಸಿಸಿ ಟಿವಿ ದೃಶ್ಯಾವಳಿ ರಕ್ಷಿಸಿಡಬೇಕು
ಅಂಶ-2: ಪೊಲೀಸ್ ಠಾಣೆಗೆ ಹಾಕಿರುವ ಸೈಡ್ವಾಲ್ ತೆಗೆಯಬೇಕು
ಅಂಶ-3: ಪೊಲೀಸ್ ಠಾಣೆ ಸುತ್ತ ಹಾಕಿರುವ 144 ಸೆಕ್ಷನ್ ತೆಗೆಯಬೇಕು
ನಿಯೋಗ ಈ ಮೂರು ಅಂಶಗಳನ್ನು ಒಳಗೊಂಡ ಮನವಿ ಸಲ್ಲಿಸಿದ್ದು, ಹೈಕೋರ್ಟ್ ಮಟ್ಟದಲ್ಲೂ ಈ ಬಗ್ಗೆ ಹೋರಾಡಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ, ವಕೀಲ ನರಸಿಂಹಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಟನೆಯ ‘ಹಿರಣ್ಯ’ ಚಿತ್ರದ ಮೆಲೋಡಿ ಸಾಂಗ್ ರಿಲೀಸ್..!